ರಾಯಚೂರು: ಮಾನ್ವಿ ತಾಲ್ಲೂಕಿನಿಂದ ಬೀದರ್ಗೆ ಅಕ್ರಮ ಮರಳು ಸಾಗಣೆ ಮಾಡುತ್ತಿದ್ದ 6 ಟಿಪ್ಪರ್ಗಳನ್ನು ಸೋಮವಾರ ರಾತ್ರಿ ಹೊರವಲಯದ ಸಾತ್ ಮೈಲ್ ರಸ್ತೆಯಲ್ಲಿ ಗ್ರಾಮೀಣ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು ಟಿಪ್ಪರ್ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ರಾಜಧನ ಇಲ್ಲದೇ ಹಾಗೂ ನಿಗದಿತಕ್ಕಿಂತ ಹೆಚ್ಚಿನ ತೂಕದ ಮರಳು ಸಾಗಣೆ ಮಾಡುತ್ತಿದ್ದು, ವಶಪಡಿಸಿಕೊಂಡ ಟಿಪ್ಪರ್ಗಳಲ್ಲಿ ಒಂದು ಮಾನ್ವಿಯ ಕಾಂಗ್ರೆಸ್ ಮುಖಂಡ ಆಲ್ದಾಳ ವೀರಭದ್ರಪ್ಪ ಅವರಿಗೆ ಸೇರಿದ್ದು ಎಂದು ಜನಸೇವಾ ಫೌಂಡೇಶನ್ ಮುಖಂಡರು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.