ADVERTISEMENT

ಸಿಎಂ ಬದಲಾವಣೆ ವಿಚಾರ: ಸಹಿ ಸಂಗ್ರಹ ಪದ್ಧತಿ ಬಿಜೆಪಿಯಲ್ಲಿ ಇಲ್ಲ -ಈಶ್ವರಪ್ಪ‌

​ಪ್ರಜಾವಾಣಿ ವಾರ್ತೆ
Published 8 ಜೂನ್ 2021, 8:35 IST
Last Updated 8 ಜೂನ್ 2021, 8:35 IST
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ   

ರಾಯಚೂರು: 'ಶಾಸಕರ ಸಹಿ ಸಂಗ್ರಹದ ಅಂತೆಕಂತೆ ಶುರುವಾಗಿದ್ದು, ಬಿಜೆಪಿಯಲ್ಲಿ ಸಹಿ ಸಂಗ್ರಹ ಪದ್ಧತಿಯಿಲ್ಲ' ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಗ್ರಾಮೀಣ ಭಾಗದ ಕೋವಿಡ್ ಸ್ಥಿತಿಗತಿ ಪರಿಶೀಲನೆ ಸಭೆಯಲ್ಲಿ ಪಾಲ್ಗೊಳ್ಳುವ ಪೂರ್ವ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

'ಈಗ ಸಹಿ ಸಂಗ್ರಹ ಮಾಡುತ್ತಿರುವುದನ್ನು ನಾನು ನೋಡಿಲ್ಲ.‌ ಹಿಂದೆ ಬೇರೆಬೇರೆ ಕಾರಣಕ್ಕೆ ‌ಸಹಿ‌ಸಂಗ್ರಹ ನಡೆದಿರಬಹುದು.‌ಆದರೆ ಇದು ನಮ್ಮ ಪಕ್ಷದಲ್ಲಿಲ್ಲ' ಎಂದರು.

ADVERTISEMENT

ಸಹಿ ಸಂಗ್ರಹದ ಪರ- ವಿರುದ್ಧ ಯಾವ ಶಾಸಕರು ಸಹಿ‌ ಮಾಡಬಾರದು. ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಕುತಂತ್ತ ರಾಜಕಾರಣ‌ ನಿಲ್ಲಿಸಬೇಕು ಎಂದು ಗುಡುಗಿದರು.

ರಾಯಚೂರು ಜಿಲ್ಲಾ ಪಂಚಾಯಿತಿ‌ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ‌ ಅಧ್ಯಕ್ಷತೆಯಲ್ಲಿ ಸಭೆ👆

ಇನ್ನಷ್ಟು ಸುದ್ದಿಗಳು
*
*
*
*
*
*
*
*
*
*
*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.