ಸಿರವಾರ: ಪಟ್ಟಣದ ಲಕ್ಷ್ಮಿವೆಂಕಟೇಶ ದೇವಸ್ಥಾನದಲ್ಲಿ ವಿಜಯದಶಮಿ ಅಂಗವಾಗಿ ಲಕ್ಷ್ಮಿ ವೆಂಕಟೇಶ್ವರ ರಥೋತ್ಸವ ಕಾರ್ಯಕ್ರಮವು ಬುಧವಾರ ವಿಜೃಂಭಣೆಯಿಂದ ನಡೆಯಿತು.
ನವರಾತ್ರಿ ಅಂಗವಾಗಿ ದೇವಸ್ಥಾನದಲ್ಲಿ ಪ್ರತಿದಿನ ಸಂಜೆ ವಿಶೇಷ ಪಂಚಾಮೃತ ಅಭಿಷೇಕ, ಲಕ್ಷ ತುಳಸಿ ಅರ್ಚನೆ, ಪುಷ್ಪಾರ್ಚನೆ ಹಾಗೂ ರಾತ್ರಿ ಭಜನೆ, ಪಲ್ಲಕ್ಕಿ ಮತ್ತು ತೊಟ್ಟಿಲು ಸೇವಾ ಕಾರ್ಯಕ್ರಮಗಳು ನಡೆದವು.
ವಿಜಯದಶಮಿ ಅಂಗವಾಗಿ ಬುಧವಾರ ಮಧ್ಯಾಹ್ನ ರಥೋತ್ಸವ ನಡೆಯಿತು.
ಯಲಗುರದಾಚಾರ್ಯ ಜೋಶಿ, ನರಸಿಂಹ ಜೋಶಿ, ಶ್ರೀನಿವಾಸಾಚಾರ್ಯ ಜೋಶಿ , ಕುಪ್ಪಾಚಾರ್ಯಜೋಶಿ, ವಾದಿರಾಜ, ವಸುಧೇಂದ್ರ, ವಿಷುತೀರ್ಥ, ಗುರುರಾಜರಾವ್, ವಿಜಯರಾವ್, ಗೋಪಾಲರಾವ, ಲಕ್ಷ್ಮಿನಾರಾಯಣ ಕಟ್ಟಿ, ಗಿರಿರಾವ್ ಗುಂಜಳ್ಳಿ, ಗೋಪಾಲ್ ದಾಸ್ ಶಿಕ್ಷಕರು, ಹನುಮಂತರಾವ್ , ಗೋಪಾಲ್ ದಾಸ್, ಕೃಷ್ಣಾಜಿರಾವ್, ರಮೇಶ ಶೆಟ್ಟಿ, ಪರಮೇಶ ಶೆಟ್ಟಿ, ವೆಂಕಟಸ್ವಾಮಿ ಪೂಜಾರಿ, ಶೇಷಪ್ಪ, ಅಮರೇಶ ಉಪ್ಪಾರ, ಗೋಪಾಲ್ ಪೊಲೀಸ್ ಸೇರಿದಂತೆ ಭಕ್ತರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.