ADVERTISEMENT

ಗಡಿಭಾಗದಲ್ಲಿ ಆರಂಭವಾಗದ ಮದ್ಯದಂಗಡಿಗಳು

​ಪ್ರಜಾವಾಣಿ ವಾರ್ತೆ
Published 5 ಮೇ 2020, 10:18 IST
Last Updated 5 ಮೇ 2020, 10:18 IST
ಶಕ್ತಿನಗರ ಬಳಿಯ ಚಂದ್ರಬಂಡಾ ಗ್ರಾಮದ ಮದ್ಯ ಅಂಗಡಿ ಆರಂಭವಾಗಿಲ್ಲ. ಜನರು ಬರದಂತೆ ತಡೆಯಲು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.
ಶಕ್ತಿನಗರ ಬಳಿಯ ಚಂದ್ರಬಂಡಾ ಗ್ರಾಮದ ಮದ್ಯ ಅಂಗಡಿ ಆರಂಭವಾಗಿಲ್ಲ. ಜನರು ಬರದಂತೆ ತಡೆಯಲು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.   

ಶಕ್ತಿನಗರ: ಶಕ್ತಿನಗರದ ಗಡಿಯಲ್ಲಿ ಮದ್ಯದಂಗಡಿಗಳು ಆರಂಭವಾಗದ್ದರಿಂದ ಮದ್ಯಪ್ರಿಯರಿಗೆ ನಿರಾಸೆಯಾಯಿತು.

ಗಡಿಭಾಗದ 5 ರಿಂದ 10 ಕಿ.ಮೀ. ಅಂತರ್‌ದಲ್ಲಿ ಇರುವ ರಾಯಚೂರು ತಾಲ್ಲೂಕಿನ ದೇವಸೂಗೂರು ಜನತಾ ಕಾಲೊನಿಯ ಸಿಎಲ್–2, ಯಾಪಲದಿನ್ನಿ –ಸಿಎಲ್ 9, ಆತ್ಕೂರು ಮತ್ತು ಚಂದ್ರಬಂಡಾ ಗ್ರಾಮದ ಎಂಎಸ್‌ಐಎಲ್ ಹಾಗೂ ವೈನ್‌ಶಾಪ್‌ ಅಂಗಡಿಗಳು ಆರಂಭವಾಗಿಲ್ಲ.

ಇದರಿಂದ ನಿರಾಸೆಗೊಂಡ ಮದ್ಯಪ್ರಿಯರು 20 ಕಿ.ಮೀ. ದೂರದಲ್ಲಿ ಇರುವ ರಾಯಚೂರು ನಗರಕ್ಕೆ ತೆರಳಿ ಅಲ್ಲಿ ಆರಂಭವಾಗಿರುವ ಮದ್ಯದಂಗಡಿಗಳಿಂದ, ಮದ್ಯಗಳನ್ನು ತಂದರು.

ADVERTISEMENT

ತೆಲಂಗಾಣ ಮತ್ತು ಆಂಧ್ರಪ್ರದೇಶದ ನೆರೆಯ ಜಿಲ್ಲೆಗಳಿಂದ ಮದ್ಯ ಖರೀದಿಸಲು ಜನರು ಬರುತ್ತಾರೆ. ಕೊರೊನಾ ಹರಡದಂತೆ ತಡೆಯಲು ದೇವಸೂಗೂರು ಸೇರಿದಂತೆ ಒಟ್ಟು 5 ಮದ್ಯದ ಅಂಗಡಿಗಳು ಬಂದ್ ಮಾಡಲಾಗಿದೆ ಎಂದು ಅಬಕಾರಿ ಇಲಾಖೆಯ ಜಿಲ್ಲಾಧಿಕಾರಿ ಕೆ.ಪ್ರಶಾಂತಕುಮಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.