ADVERTISEMENT

ಮಸ್ಕಿ: ಬಜ್ಜಿ ಕರಿದು ಚುನಾವಣೆ ಪ್ರಚಾರ ಮಾಡಿದ ರೇಣುಕಾಚಾರ್ಯ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2021, 14:21 IST
Last Updated 7 ಏಪ್ರಿಲ್ 2021, 14:21 IST
ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಣ್ಣೂರ ಗ್ರಾಮದ ರಸ್ತೆ ಪಕ್ಕದ ಹೋಟಲ್‌ನಲ್ಲಿ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರು ಬಜ್ಜಿ ಕರಿಯುವ ಮೂಲಕ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಪರ ಮತಯಾಚನೆ ಮಾಡಿದರು
ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಣ್ಣೂರ ಗ್ರಾಮದ ರಸ್ತೆ ಪಕ್ಕದ ಹೋಟಲ್‌ನಲ್ಲಿ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರು ಬಜ್ಜಿ ಕರಿಯುವ ಮೂಲಕ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಪರ ಮತಯಾಚನೆ ಮಾಡಿದರು   

ಮಸ್ಕಿ: ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರು ಮಸ್ಕಿ‌ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಪ್ರಚಾರ ವಿಭಿನ್ನವಾಗಿ ಮಾಡುತ್ತಿದ್ದು, ಕ್ಷೇತ್ರ‌‌ ವ್ಯಾಪ್ತಿಯ ಕಣ್ಣೂರ ಗ್ರಾಮದಲ್ಲಿ ರಸ್ತೆ ಪಕ್ಕದ ಹೋಟೆಲ್‌ನಲ್ಲಿ ಬಜ್ಜಿ ಕರಿದು ಮತಯಾಚನೆ ಮಾಡಿದರು.

ಮೊದಲು ತಾವೊಬ್ಬರೇ ಮಸಾಲೆ‌ ಚುರುಮುರಿ ಖರೀದಿಸಿ ಹಣ ನೀಡಿದರು. ಆ ನಂತರ ಕಾರ್ಯಕರ್ತರಿಗಾಗಿ ಹೋಟೆಲ್‌ನಲ್ಲಿದ್ದ ಎಲ್ಲ ಚುರುಮುರಿ, ಸೇವು ಖರೀದಿಸಿಕೊಟ್ಟರು.

ಬಜ್ಜಿ ಕರಿಯುವುದನ್ನು ಗಮನಿಸಿ, ಕೈಯಲ್ಲಿದ್ದ ಜಾರಿ ಪಡೆದುಕೊಂಡು, ತಾವೇ ಬಜ್ಜಿ ಕರಿದು ಬೆಂಬಲಿಗರಿಗೆ ತಿನ್ನಲು ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.