ADVERTISEMENT

ಶಾಸಕ ರೇಣುಕಾಚಾರ್ಯಗೆ ಆರತಿ ಬೆಳಗುವಾಗ ಮಹಿಳೆ ತಲೆಕೂದಲಿಗೆ ಬೆಂಕಿ‌

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 4:18 IST
Last Updated 8 ಏಪ್ರಿಲ್ 2021, 4:18 IST
ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಣ್ಣೂರ ಗ್ರಾಮದಲ್ಲಿ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರಿಗೆ ಆರತಿ‌ ಬೆಳಗಲು ಬಂದಿದ್ದ ಮಹಿಳೆಯ ಕೂದಲಿಗೆ ಆಕಸ್ಮಿಕವಾಗಿ ಬೆಂಕಿ‌ ತಗುಲಿದ್ದರಿಂದ ಹೊಗೆ ಬರುತ್ತಿರುವುದು
ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಣ್ಣೂರ ಗ್ರಾಮದಲ್ಲಿ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರಿಗೆ ಆರತಿ‌ ಬೆಳಗಲು ಬಂದಿದ್ದ ಮಹಿಳೆಯ ಕೂದಲಿಗೆ ಆಕಸ್ಮಿಕವಾಗಿ ಬೆಂಕಿ‌ ತಗುಲಿದ್ದರಿಂದ ಹೊಗೆ ಬರುತ್ತಿರುವುದು   

ಮಸ್ಕಿ: ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಣ್ಣೂರ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಪರ ಪ್ರಚಾರಕ್ಕೆ ಬಂದಿದ್ದ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರಿಗೆ ಆರತಿ‌ ಬೆಳಗಲು ಬಂದಿದ್ದ ಮಹಿಳೆಯ ಕೂದಲಿಗೆ ಆಕಸ್ಮಿಕವಾಗಿ ಬೆಂಕಿ‌ ತಗುಲಿತು.

ಮಹಿಳೆಯರು ಆರತಿ ಬೆಳಗಲು ಸರದಿಯಲ್ಲಿ ನಿಂತಿದ್ದರು. ಒಬ್ಬ ಮಹಿಳೆ ಹಿಡಿದಿದ್ದ ಆರತಿ ಮುಂದೆ ನಿಂತಿದ್ದ ಇನ್ನೊಬ್ಬ ಮಹಿಳೆಯ ಕೂದಲಿಗೆ ತಾಗಿದ್ದರಿಂದ ಬೆಂಕಿ ಹೊತ್ತಿಕೊಂಡಿತು.ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ತಕ್ಷಣವೇ ಕೂದಲಿನ ಬೆಂಕಿ ನಂದಿಸಿದರು. ತನ್ನ ಕೂದಲಿಗೆ ಬೆಂಕಿ‌ ತಗುಲಿದ್ದು ಆ ಮಹಿಳೆಗೆ ತಕ್ಷಣಕ್ಕೆ ಗೊತ್ತಾಗಲಿಲ್ಲ. ಆರತಿ ಬೆಳಗಿದ ಮಹಿಳೆಯರಿಗೆ ರೇಣುಕಾಚಾರ್ಯ ತಲಾ ₹ 100 ಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT