ADVERTISEMENT

ಕೆಲಸ ಮಾಡದ ಶಾಸಕ: ಜೆಡಿಎಸ್ ರಾಜ್ಯ ಮುಖಂಡ ಸಿದ್ದು.ವೈ.ಬಂಡಿ ಆರೋಪ

​ಪ್ರಜಾವಾಣಿ ವಾರ್ತೆ
Published 6 ಜೂನ್ 2021, 4:53 IST
Last Updated 6 ಜೂನ್ 2021, 4:53 IST
ಮುದಗಲ್ ಪಟ್ಟಣದ ಮೇಗಳಪೇಟೆಯಲ್ಲಿ ಜೆಡಿಎಸ್ ರಾಜ್ಯ ಮುಖಂಡ ಸಿದ್ದು ವೈ ಬಂಡಿ ಸ್ಯಾನಿಟೈಸರ್ ಸಿಂಪಡಣೆ ಕಾರ್ಯಕ್ಕೆ ಚಾಲನೆ ನೀಡಿದರು
ಮುದಗಲ್ ಪಟ್ಟಣದ ಮೇಗಳಪೇಟೆಯಲ್ಲಿ ಜೆಡಿಎಸ್ ರಾಜ್ಯ ಮುಖಂಡ ಸಿದ್ದು ವೈ ಬಂಡಿ ಸ್ಯಾನಿಟೈಸರ್ ಸಿಂಪಡಣೆ ಕಾರ್ಯಕ್ಕೆ ಚಾಲನೆ ನೀಡಿದರು   

ಮುದಗಲ್: ‘ಲಿಂಗಸುಗೂರು ಶಾಸಕ ಡಿ.ಎಸ್. ಹೂಲಗೇರಿ ಹೆಸರಿಗಷ್ಟೇ ಶಾಸಕ’ ಎಂದು ಜೆಡಿಎಸ್ ರಾಜ್ಯ ಮುಖಂಡ ಸಿದ್ದು.ವೈ.ಬಂಡಿ ಆರೋಪಿಸಿದರು.

ಪಟ್ಟಣದ ಮೇಗಳಪೇಟೆಯಲ್ಲಿ ಸ್ಯಾನಿಟೈಸರ್ ಸಿಂಪಡಣೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ಶಾಸಕ ಹೂಲಗೇರಿ ಅವರು ಗ್ರಾಮೀಣ ಭಾಗವನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಮುದಗಲ್ ನಿರಂತರ ಕುಡಿಯುವ ನೀರಿನ ಯೋಜನೆ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಪಟ್ಟಣದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ ಇದ್ದರೂ 8 ದಿನಕ್ಕೊಮ್ಮೆ, 2 ಗಂಟೆ ಮಾತ್ರ ನೀರು ಬಿಡುತ್ತಾರೆ. ಪುರಸಭೆ ಸದಸ್ಯರು ಶಾಸಕರ ಕೈಗೊಂಬೆಯಾಗಿದ್ದಾರೆ. ಕ್ಷೇತ್ರದಲ್ಲಿ ಶಾಸಕರ ಕಾರ್ಯ ಶೂನ್ಯ ಎಂದು ದೂರಿದರು.

ADVERTISEMENT

ಜೆಡಿಎಸ್ ಮುದಗಲ್ ಘಟಕದ ಅಧ್ಯಕ್ಷ ಅಮೀರ್ ಬೇಗ ಉಸ್ತಾದ, ಪುರಸಭೆ ಸದಸ್ಯರಾದ ಕರಿಯಪ್ಪ ಯಾದವ, ಮೈಹಿಬೂಬಸಾಬ ಕಡ್ಡಿಪುಡಿ, ನಾಗರಾಜ ತಳವಾರ, ತಾಲ್ಲೂಕು ಕಾರ್ಯದರ್ಶಿ ವಿರೇಶ, ಅರುಣ ಕುಮಾರ ಯರದಿಹಾಳ, ಯುವ ಘಟಕ ಅಧ್ಯಕ್ಷ ಅನ್ವರ ಮೀಯಾ ಕಂದಗಲ್ ಹಾಗೂ ಉಪಾಧ್ಯಕ್ಷ ರಹೀಮಾನಸಾಬ ಅರಂಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.