ADVERTISEMENT

ಪುತ್ರನ ಕರೆತರಲು ಹೊರಟಿದ್ದ ತಾಯಿ ಅಪಘಾತದಲ್ಲಿ ಸಾವು

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2020, 12:31 IST
Last Updated 21 ಮಾರ್ಚ್ 2020, 12:31 IST
ಮುಳಕಾಲ್ಮೂರು ಬಳಿ ನಡೆದ ಅಪಘಾಥದಲ್ಲಿ ಕ್ರೂಸರ್ ವಾಹನ ನುಚ್ಚು ನೂರಾಗಿರುವುದು
ಮುಳಕಾಲ್ಮೂರು ಬಳಿ ನಡೆದ ಅಪಘಾಥದಲ್ಲಿ ಕ್ರೂಸರ್ ವಾಹನ ನುಚ್ಚು ನೂರಾಗಿರುವುದು   

ಮಸ್ಕಿ (ರಾಯಚೂರು): ಕೊಡಗು ಜಿಲ್ಲೆ ಕುಶಾಲನಗರದ ಸೈನಿಕ ಶಾಲೆ ರಜೆ ಘೋಷಿಸಿದ್ದರಿಂದ ಅಲ್ಲಿದ್ದ ಮಕ್ಕಳನ್ನು ಕರೆತರಲು ಜಿಲ್ಲೆಯಿಂದ ಹೊರಟಿದ್ದ ಐದು ವಿದ್ಯಾರ್ಥಿಗಳ ಪಾಲಕರಿದ್ದ ಕ್ರೂಸರ್‌ ಮತ್ತು ಲಾರಿ ನಡುವೆ ಚಿತ್ರದುರ್ಗದ ಮೊಳಕಾಲ್ಮೂರು ಬಳಿ ಶುಕ್ರವಾರ ತಡರಾತ್ರಿ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಒಬ್ಬರು ಮಹಿಳೆ ಹಾಗೂ ವಾಹನ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಉದ್ಭಾಳ ಗ್ರಾಮದ ಸಾವಿತ್ರಮ್ಮ ಗೌಡರ (34) ಹಾಗೂ ಮುದಗಲ್‌ ಪಟ್ಟಣದ ಚಾಲಕ ಮಹಾಂತೇಶ (35) ಮೃತರು. ಅಪಘಾತದಲ್ಲಿ ನಾಲ್ವರು ಮಹಿಳೆಯರು ಮತ್ತು ಇಬ್ಬರು ಪುರುಷರು ಗಾಯಗೊಂಡಿದ್ದಾರೆ. ಪುತ್ರನನ್ನು ಕರೆತರಲು ಹೊರಟಿದ್ದ ತಾಯಿ ಮೃತಪಟ್ಟ ಸುದ್ದಿ ತಿಳಿದು ಉದ್ಭಾಳ ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು. ಗ್ರಾಮದಲ್ಲಿ ಶನಿವಾರ ಅಂತ್ಯಕ್ರಿಯೆ ನೆರವೇರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT