ಮುದಗಲ್: ಮುದಗಲ್ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕೆಂದು ಮುದಗಲ್ ಬಿಜೆಪಿ ಮಂಡಲದಿಂದ ಹಾಗೂ ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಮಾನಪ್ಪ ಡಿ.ವಜ್ಜಲರವರ ನೇತೃತ್ವದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಮುದಗಲ್ ಕೋಟೆ ಉತ್ಸವ, ಬಸ್ ಡಿಪೋ, ಅಗ್ನಿಶಾಮಕ ಠಾಣೆ ಮಂಜೂರಾತಿ, ಪಟ್ಟಣದ ಕಸಾಯಿಖಾನೆ ಸ್ಥಳಾಂತರ, ನಗರದ ಮುಖ್ಯ ರಸ್ತೆಗೆ ಅನುದಾನ ಒದಗಿಸುವುದು, ಐತಿಹಾಸಿಕ ಕೋಟೆ ಜೀರ್ಣೋದ್ಧಾರ, ಲಿಂಗಸುಗೂರು ನಗರಕ್ಕೆ ಆರ್.ಟಿ.ಒ ಕಚೇರಿ ಮಂಜೂರಾತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕೆಂದು ಮನವಿ ಮಾಡಿದರು.
ಮುದಗಲ್ ಬಿಜೆಪಿ ಘಟಕದ ಅಧ್ಯಕ್ಷ ಸಿದ್ದಯ್ಯ ಗ್ಯಾನಪ್ಪಯ್ಯನವರ, ಪುರಸಭೆ ಸದಸ್ಯರಾದ ಉದಯ ಕುಮಾರ, ನವನೀತ ಶೇಠ, ಮಹ್ಮದ ರಫೀ, ಫಕೀರಪ್ಪ ಕುರಿ, ಸಂತೋಷ ಸುರಪುರ ಮುಖಂಡರಾದ ಚಂದಾವಲಿಸಾಬ, ಮಲ್ಲಪ್ಪ ಮಾಟೂರ, ಮೌನೇಶ ಕಟ್ಟಿಮನಿ, ಈರಣ್ಣ ಕಟ್ಟಿಮನಿ, ಮಂಜುನಾಥ ನಂದವಾಡಗಿ, ಮಹಿಬೂಬಸಾಬ ಡೋಂಗ್ರಿ, ನಾಗರಾಜ ಯಾದವ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.