ADVERTISEMENT

ಗುರು ಗುಂಡಯ್ಯ ತಾತನವರ ಪುಣ್ಯೋತ್ಸವ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2019, 10:38 IST
Last Updated 14 ಅಕ್ಟೋಬರ್ 2019, 10:38 IST
ತುರ್ವಿಹಾಳದಲ್ಲಿ 10 ನೇ ವರ್ಷದ ಗುರು ಗುಂಡಯ್ಯ ತಾತನವರ ಪ್ರವಚನ ಕೊನೆ ದಿನವಾದ ಭಾನುವಾರ ಕುಂಭೋತ್ಸವ ಮೆರವಣಿಗೆ ನಡೆಯಿತು
ತುರ್ವಿಹಾಳದಲ್ಲಿ 10 ನೇ ವರ್ಷದ ಗುರು ಗುಂಡಯ್ಯ ತಾತನವರ ಪ್ರವಚನ ಕೊನೆ ದಿನವಾದ ಭಾನುವಾರ ಕುಂಭೋತ್ಸವ ಮೆರವಣಿಗೆ ನಡೆಯಿತು   

ತುರ್ವಿಹಾಳ: ಪಟ್ಟಣದಲ್ಲಿ ಭಾನುವಾರ ಗುರು ಗುಂಡಯ್ಯ ಅಪ್ಪ ಮತ್ತು ರಾಚಯ್ಯ ತಾತನವರ 10 ನೇ ವರ್ಷದ ಪುಣ್ಯೋತ್ಸವದ ಅಂಗವಾಗಿ ಪ್ರವಚನ ಮಹಾಮಂಗಲ ಕುಂಭೋತ್ಸವಕಾರ್ಯಕ್ರಮ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಪಟ್ಟಣದ ಸುತ್ತಮುತ್ತಲಿನಿಂದ ಬಂದಿದ್ದ ಗ್ರಾಮಸ್ಥರು, ಗುಂಡಯ್ಯ ತಾತನ ಮಠದಿಂದ ಆರಂಭವಾದ ಗುರು ಗುಂಡಯ್ಯ ಮತ್ತು ರಾಚಯ್ಯ ತಾತನವರ ಭಾವ ಚಿತ್ರದ ಮೆರವಣಿಗೆ ಡೊಳ್ಳು ಕುಣಿತ, ವಾಧ್ಯ ಮೇಳ, ಭಜನಾ ಮೇಳ, ನಂದಿ ಕೋಲಿನ ಕುಣಿತ ಪಟ್ಟಣದ ಪ್ರಮುಖ ವಾಲ್ಮೀಕಿ ವೃತ್ತ, ಬಸವೇಶ್ವರ ವೃತ್ತ, ಕನಕದಾಸ ವೃತ್ತದ ಮೂಲಕ ಗುರು ಗುಂಡಯ್ಯ ತಾತನವರ ಕರ್ತೃ ಗದ್ದುಗೆಯವರೆಗೆ ಸಾಗಿ ಬಂದಿತು

ಗುರು ಗುಂಡಯ್ಯ ತಾತನ ಪುಣ್ಯೋತ್ಸವದಲ್ಲಿ ವಿಧವಿಧದ ವಸ್ತ್ರಗಳಿಂದ ಅಲಂಕಾರಗೊಂಡ ಮಹಿಳೆಯರು 501 ಕುಂಭಗಳನ್ನು ಹೊತ್ತು ಹಾಗೂ 201 ಕಳಸಗಳೊಂದಿಗೆ ಸಡಗರ ಸಂಭ್ರಮದಿಂದ ಭಾಗವಹಿಸಿದರು. ಭಕ್ತರು ಗುರು ಗುಂಡಯ್ಯ ಅಪ್ಪಾಜಿಗೆ ಜಯವಾಗಲಿ ಎಂದು ಜಯಘೋಷಗಳನ್ನು ಕೂಗುತ್ತಾ ಭಕ್ತಿಯನ್ನು ಸಮರ್ಪಿಸಿದರು.

ADVERTISEMENT

ಪ್ರತಿದಿನ ಗುರು ಗುಂಡಯ್ಯ ತಾತನ ಸರ್ವೇಶ್ವರ ಮಠದಲ್ಲಿ ಸರ್ವ ಜನಾಂಗದ ಭಕ್ತರು ಭೇಧ ಭಾವವಿಲ್ಲದೆ ಪ್ರಸಾದವನ್ನು ಸೇವಿಸುವ ದೃಶ್ಯ ಭಾವೈಕ್ಯತೆಯ ಪ್ರತೀಕವಾಗಿ ಕಂಡು ಬಂತು

ಈ ಕಾರ್ಯಕ್ರಮದಲ್ಲಿ ಸರ್ವೇಶ್ವರ ಮಠದ ಗುಂಡಯ್ಯ ಅಪ್ಪಾಜಿ, ಮಾದಯ್ಯ ಗುರುವಿನ್, ಅಮರಗುಂಡಯ್ಯ ಶಿವಾಚಾರ್ಯರು, ಮುದಿಸಂಗಯ್ಯ ತಾತ, ಚಿದಾನಂದಯ್ಯ ಗುರುವಿನ್, ವಿರುಪಾಕ್ಷ ತಾತ, ಉದಾಸಯ್ಯಸ್ವಾಮಿ, ತಿಮ್ಮನಗೌಡ ಕೆಲ್ಲೂರು, ತಿರುಪತಿ ನಾಯಕ, ಮಂಟೆಪ್ಪ ಎಲೆಕೂಡ್ಗಿ, ನಾಗಪ್ಪ ಮೂಲಿ ಮನಿ ,ಚಂದ್ರಗೌಡ ಸಾತನೂರು, ಗುರುಪ್ರಸಾದ ಹಟ್ಟಿ, ಅಮರೇಶ ಕೆಲ್ಲೂರು, ಅಡಿವೆಪ್ಪ ಸಜ್ಜಲಗುಡ್ಡ,ಯಂಕನಗೌಡ ಬ್ಯಾಲಿಹಾಳ ಇತರರು ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.