ಮಸ್ಕಿ (ರಾಯಚೂರು ಜಿಲ್ಲೆ): ಪಟ್ಟಣ ಪಕ್ಕದಲ್ಲಿ ಬಹಿರ್ದೆಸೆಗೆ ಹೋಗಿ ಹಳ್ಳದಲ್ಲಿ ಸಿಲುಕಿದ್ದವರ ಪೈಕಿ ಒಬ್ಬ ಯುವಕ ಹಳ್ಳದಲ್ಲಿ ಕೊಚ್ಚಿ ಹೋಗಿದ್ದು, ಯುವಕನ ರಕ್ಷಣೆಗೆ ಹೋಗಿದ್ದ ಅಗ್ನಿಶಾಮಕ ಠಾಣೆಯ ಇಬ್ಬರು ಸಿಬ್ಬಂದಿ ಹಳ್ಳದ ಮಧ್ಯೆ ಸಿಲುಕಿದ್ದಾರೆ.
ಯುವಕನನ್ನು ರಕ್ಷಿಸಲು ಹಳ್ಳದ ಮಧ್ಯೆದ ಗಿಡಕ್ಕೆ ಕಟ್ಟಿದ್ದ ಹಗ್ಗವು ನೀರಿನ ರಭಸಕ್ಕೆ ತುಂಡಾಗಿದ್ದು, ಅವಘಡ ಹೊಸ ತಿರುವು ಪಡೆಯಲು ಕಾರಣವಾಗಿದೆ. ಯುವಕನನ್ನು ಹಗ್ಗದ ನೆರವಿನಿಂದ ಕರೆತರುವಾಗ ತುಂಡಾಗಿದೆ.
ಇನ್ನೊಬ್ಬ ಯುವಕ ಹಳ್ಳದ ಮದ್ಯೆ ಎತ್ತರದ ಜಾಗದಲ್ಲಿ ಸುರಕ್ಷಿತವಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಈಗ ಅಪಾಯದಲ್ಲಿದ್ದಾರೆ.
ಭಾನುವಾರ ನಸುಕಿನಲ್ಲಿ ಬಹಿರ್ದೆಸೆಗೆ ಹೋಗಿದ್ದ ಇಬ್ಬರು ಯುವಕರ ಸುತ್ತಲೂ ಹಳ್ಳದ ನೀರು ಆವರಿಸಿಕೊಂಡಿರುವ ಘಟನೆ ಮಸ್ಕಿ ಪಟ್ಟಣದಲ್ಲಿ ನಡೆದಿತ್ತು.
ಪಟ್ಟಣದ ನಿವಾಸಿಗಳಾದ ಚನ್ನಬಸವ ಮತ್ತು ಜಲೀಲ ಸಂಕಷ್ಟಕ್ಕೆ ಸಿಲುಕಿರುವ ಯುವಕರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.