ರಾಯಚೂರು:ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ಮಧ್ಯಾಹ್ನ ಅರ್ಧಗಂಟೆ ಅಲಿಕಲ್ಲು ಸಹಿತ ಮಳೆ ಸುರಿದು ತಂಪು ವಾತಾವರಣ ಹರಡಿತು.
ಬಿಸಿಲಿನ ತಾಪದಿಂದ ಬಸವಳಿದಿದ್ದ ಜನರು ಮಳೆ ಬೀಳುವುದನ್ನು ನೋಡಿ ಸಂತಸ ಪಟ್ಟರು. ಕೃಷಿ ಭೂಮಿಗೆ ಒಳ್ಳೆಯದಾಯಿತು. ಮಳೆಗಾಲ ಆರಂಭವಾಗಿದೆ ಎನ್ನುವ ಮಾತುಗಳನ್ನಾಡಿದರು.
ಮಕ್ಕಳು ಮಳೆಯಲ್ಲಿ ನೆನೆದುಕೊಂಡು ಆಲಿಕಲ್ಲುಗಳನ್ನು ಸಂಗ್ರಹಿಸುತ್ತಿದ್ದ ದೃಶ್ಯ ಸುಂದರವಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.