ರಾಯಚೂರು: ಲಾಕ್ ಡೌನ್ ಹಿನ್ನೆಲೆಯಲ್ಲಿ ದೇವಸ್ಥಾನಗಳು ಬಂದ್ ಆಗಿರುವ ಕಾರಣ ಆರ್ಚಕರಿಗೆ ಆರ್ಥಿಕ ಸಮಸ್ಯೆ ಎದುರಾಗಿದ್ದು ಸರ್ಕಾರ ಆರ್ಥಿಕ ಸೌಲಭ್ಯ ನೀಡಬೇಕು ಎಂದು ಜಿಲ್ಲೆಯ ವಿವಿಧ ದೇವಸ್ಥಾನದ ಅರ್ಚಕರು ಜಿಲ್ಲಾಡಳಿತ ಸಿಬ್ಬಂದಿಗೆ ಗುರುವಾರ ಮನವಿ ಸಲ್ಲಿಸಿದರು.
ದೇವಸ್ಥಾನದಲ್ಲಿ ಸೇವೆ ಮಾಡುವ ನಮಗೆ ಲಾಕ್ ಡೌನ್ ನಿಂದಾಗಿ ದಿನ ನಿತ್ಯದ ಜೀವನ ನಡೆಸಲು ತೀವ್ರ ತೊಂದರೆಯಾಗಿದೆ. ಬೇರೆ ಆದಾಯ ಮೂಲವಿಲ್ಲದ ನಮಗೆ ಸರ್ಕಾರದಿಂದ ನೀಡುವ ಆರ್ಥಿಕ ಸೌಲಭ್ಯಗಳನ್ನು ನೀಡಿ ಸಂಕಷ್ಟದ ಕಾಲಕ್ಕೆ ನೆರವು ನೀಡಬೇಕು ಎಂದು ಶೀಲಾ ಕುಮಾರ ಶಾಸ್ತ್ರೀ, ದತ್ತ ದಿಗಂಬರ ಜೋಶಿ, ನಾರಾಯಣ ಭಟ್ಟ ಜೋಶಿ, ಸುಹಾಸ್, ಗೋಪಾಲ ಜೋಶಿ, ವಸಂತ ಭಟ್ ಮತ್ತಿತರರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.