ADVERTISEMENT

ಸಿಡಿಲು ಬಡಿದು ಕುರಿಗಳು ಸಾವು

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2021, 2:58 IST
Last Updated 5 ಅಕ್ಟೋಬರ್ 2021, 2:58 IST
ಕವಿತಾಳ ಸಮೀಪದ ತುಪ್ಪದೂರು ಗ್ರಾಮದ ಹತ್ತಿರ ಸೋಮವಾರ ಸಿಡಿಲು ಬಡಿದು ಕುರಿಗಳು ಸತ್ತಿರುವುದು
ಕವಿತಾಳ ಸಮೀಪದ ತುಪ್ಪದೂರು ಗ್ರಾಮದ ಹತ್ತಿರ ಸೋಮವಾರ ಸಿಡಿಲು ಬಡಿದು ಕುರಿಗಳು ಸತ್ತಿರುವುದು   

ಕವಿತಾಳ: ಮಸ್ಕಿ ತಾಲ್ಲೂಕಿನ ಪಾಮನಕಲ್ಲೂರು ಹೋಬಳಿ ವ್ಯಾಪ್ತಿಯ ಉಮಳಿ ತುಪ್ಪದೂರು ಗ್ರಾಮದ ಹತ್ತಿರ ಸೋಮವಾರ ಸಂಜೆ ಸಿಡಿಲು ಬಡಿದು 20 ಕುರಿಗಳು ಮತ್ತು ಒಂದು ನಾಯಿ ಸಾವನ್ನಪ್ಪಿದೆ.

ಕುರಿಗಳು ತುಪ್ಪದೂರು ಗ್ರಾಮದ ದೇಸಪ್ಪ ಚನ್ನಪ್ಪ ಅವರಿಗೆ ಸೇರಿದ್ದು, ಕುರಿ ಮೇಯಿಸಲು ತೆರಳಿದ್ದಾಗ ಅಮರಯ್ಯ ದೇವಸ್ಥಾನದ ಹತ್ತಿರದ ಜಮೀನಿನಲ್ಲಿ ಸಿಡಿಲು ಬಡಿದಿದೆ. ಕುರಿ ಹಿಂದೆ ಇದ್ದ ದೇಸಪ್ಪ ಅವರಿಗೆ ತೊಂದರೆಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT