ರಾಯಚೂರು: ನಗರದ ಮಧ್ಯಭಾಗ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಬೈಕ್ಗೆ ಟಿಪ್ಪರ್ ಡಿಕ್ಕಿಯಾಗಿ ಬೈಕ್ ಚಲಾಯಿಸುತ್ತಿದ್ದ ವಯೋವೃದ್ಧರೊಬ್ಬರು ಬುಧವಾರ ಸ್ಥಳದಲ್ಲೇ ಮೃತಪಟ್ಟಿರುವ ದೃಶ್ಯವು ವೈರಲ್ ಆಗಿದೆ.
ಕಲ್ಲೂರು ಕಾಲೋನಿ ನಿವಾಸಿ ಕರಿವೀರಯ್ಯ (79) ಅವರ ತಲೆಮೇಲೆ ಟಿಪ್ಪರ್ ಚಕ್ರ ಹಾಯ್ದುಹೋಗಿದೆ. ಮಂತ್ರಾಲಯ ಮಾರ್ಗದಿಂದ ಬರುತ್ತಿದ್ದ ಟಿಪ್ಪರ್, ಮುಂಭಾಗದಲ್ಲಿ ಸಂಚರಿಸುತ್ತಿದ್ದ ಬೈಕ್ಗೆ ಹಿಂಬದಿಯಿಂದ ಡಿಕ್ಕಿಯಾಗಿದೆ.
ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.