ಹಟ್ಟಿಚಿನ್ನದ ಗಣಿ: ಸಮೀಪದ ಗುಡ್ಲಬಂಡಿ ಜಲಾಶಯ ವೀಕ್ಷಿಸುವಾಗ ಗುರುವಾರ ಏಕಾಏಕಿ ನೀರು ಹರಿದು ಬಂದು ಕೊಚ್ಚಿ ಹೋಗಿದ್ದ ತಂದೆ ಮಗನ ಶವಗಳು ಶುಕ್ರವಾರ ಹಳ್ಳದಲ್ಲಿ ಪತ್ತೆಯಾಗಿವೆ.
ದೇವದುರ್ಗ ತಾಲ್ಲೂಕು ಮೂಡಲಗುಂಡ ಗ್ರಾಮದ ಕೃಷ್ಣಪ್ಪ (35) ಹಾಗೂ ಧನುಷ್ (5) ಶವಗಳನ್ನು ಅಗ್ನಿಶಾಮಕ ಸಿಬ್ಬಂದಿ ಪತ್ತೆ
ಮಾಡಿದ್ದಾರೆ. ಮಗನನ್ನು ಕರೆದುಕೊಂಡು ಇಬ್ಬರು ಗೆಳೆಯರೊಂದಿಗೆ ಜಲಾಶಯ ನೋಡುವುದಕ್ಕೆ ಕೃಷ್ಣಪ್ಪ ಬಂದಿದ್ದರು.
ದೀಢೀರ್ ಹರಿದ ಬಂದ ನೀರಿನಲ್ಲಿ ಸಿಲುಕಿದ್ದರು. ಇಬ್ಬರು ಕಷ್ಟಪಟ್ಟು ಪ್ರಾಣ ಉಳಿಸಿಕೊಂಡಿದ್ದರು. ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.