ರಾಯಚೂರು: ‘ಇನ್ನು ಮುಂದೆ ರಾಜ್ಯದಲ್ಲಿ ಯಾವುದಾದರೂ ರಾಜಕಾರಣಿ ರೆಸಾರ್ಟ್ಗೆ ಹೋಗಿ ರಾಜಕಾರಣ ಮಾಡಿದ್ದು ಸುದ್ದಿಯಾದರೆ, ಅಂಥವರಿಗೆ ರೈತ ಸಂಘದ ಮಹಿಳಾ ಕಾರ್ಯಕರ್ತರು ಸೆಗಣಿ ಎರಚಿ ಪ್ರತಿಭಟನೆ ಮಾಡಲಿದ್ದಾರೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ ರಾಜಕೀಯವು ಜನರಿಗೆ ಹೇಸಿಗೆ ತರಿಸುವಂತಿದೆ. ಪೋಲಿ ಪುಂಡರಿಗೆ ಮತದಾರರು ಬುದ್ಧಿ ಕಲಿಸಬೇಕು. ಶಾಸಕರ ಮಾರಾಮಾರಿ ಘಟನೆಯಿಂದ ರಾಜ್ಯಕ್ಕೆ ಅಪಮಾನವಾಗಿದೆ’ ಎಂದರು.
* ಇದನ್ನೂ ಓದಿ:ಪುಂಡಪೋಕರಿಗಳು ಶಾಸಕರಾಗುತ್ತಿದ್ದಾರೆ: ಕೋಡಿಹಳ್ಳಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.