ರಾಯಚೂರು: ಶಕ್ತಿನಗರದ ಬಳಿ ಕೃಷ್ಣಾನದಿಯಿಂದ ನೀರು ಪೂರೈಕೆಯಾಗುತ್ತಿದ್ದ ಜಾಕ್ವೆಲ್ನಲ್ಲಿ ಪಂಪ್ಸೆಟ್ ಕೆಟ್ಟು ಹೋಗಿ ಮೂರು ದಿನಗಳಾದರೂ ದುರಸ್ತಿಯಾಗಿಲ್ಲ. ಇದರಿಂದ ರಾಯಚೂರು ನಗರದ 12 ವಾರ್ಡ್ಗಳಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಜನರ ತೊಂದರೆ ಅನುಭವಿಸುತ್ತಿದ್ದಾರೆ.
ವಿವಿಧ ಬಡಾವಣೆಗಳಿಗೆ ನೀರು ಪೂರೈಸಲು ನಗರಸಭೆಯಿಂದ 35 ನೀರಿನ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ. ಜವಾಹರ ನಗರ, ಗಾಜಗಾರ ಪೇಟೆ ಹಾಗೂ ಹರಿಜನವಾಡದಲ್ಲಿ ಜನರು ನೀರಿಗಾಗಿ ಟ್ಯಾಂಕರ್ಗಳಿಗೆ ಮುಗಿ ಬೀಳುತ್ತಿರುವ ಚಿತ್ರಣ ಭಾನುವಾರ ಕಂಡುಬಂತು.
ನಗರದ 35 ವಾರ್ಡ್ಗಳ ಪೈಕಿ 23 ವಾರ್ಡ್ಗಳಿಗೆ ತುಂಗಭದ್ರಾ ನದಿ ನೀರು ಸರಬರಾಜು ವ್ಯವಸ್ಥೆ ಇದೆ. ’ಶೀಘ್ರ ದುರಸ್ತಿಗಾಗಿ ಚೆನ್ನೈನಿಂದ ತಂತ್ರಜ್ಞರು ಬಂದಿದ್ದಾರೆ. ಭಾನುವಾರ ಸಂಜೆವರೆಗೂ ದುರಸ್ತಿಯಾಗಲಿದೆ. ನೀರು ಪೂರೈಸಲು ಪರ್ಯಾಯ ವ್ಯವಸ್ಥೆ ಮಾಡುತ್ತಿದ್ದೇವೆ’ ಎಂದು ನಗರಸಭೆ ಪೌರಾಯುಕ್ತ ರಮೇಶ ನಾಯಕ ’ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.