ರಾಯಚೂರು: ಭೀಮಾ ನದಿಯಲ್ಲಿ ಹರಿದುಬರುವ 8 ಲಕ್ಷ ಕ್ಯುಸೆಕ್ ಪ್ರವಾಹ ಹಾನಿ ನಿಯಂತ್ರಿಸಲು ರಾಯಚೂರು ಜಿಲ್ಲಾಡಳಿತವು ಪೂರ್ವ ತಯಾರಿ ಮಾಡಿಕೊಂಡು ಮೂರು ದಿನಗಳಾದರೂ ಕಲಬುರ್ಗಿಯಿಂದ ಇನ್ನೂ ನೀರು ತಲುಪಿಲ್ಲ!
ಕೃಷ್ಣಾನದಿಯೊಂದಿಗೆ ಭೀಮಾನದಿ ಸಂಗಮವಾಗುವ ರಾಯಚೂರಿನ ಗುರ್ಜಾಪುರದಲ್ಲಿ ಎರಡು ದಿನಗಳಿಂದ ನೀರು ಇಳಿಮುಖವಾಗುತ್ತಿದೆ. ಸೊನ್ನ ಬ್ಯಾರೇಜ್ ನಿಂದ 8 ಲಕ್ಷ ಕ್ಯುಸೆಕ್ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಡಳಿತದಿಂದ ಕೃಷ್ಣಾ ನದಿತೀರದ ಜನರಿಗೆ ಶನಿವಾರವೇ ಮುನ್ನಚ್ಚರಿಕೆ ನೀಡಲಾಗಿತ್ತು. ಪ್ರವಾಹ ನಿರ್ವಹಣೆಗಾಗಿ ಮಿಲಿಟರಿ ತಂಡವು ಬಂದಿದೆ. ನಿರೀಕ್ಷಿಸಿದಂತೆ ಕೃಷ್ಣಾನದಿ ಪ್ರವಾಹ ಏರಿಕೆ ಆಗುತ್ತಿಲ್ಲ. ಬದಲಾಗಿ ಇಳಿಮುಖವಾಗಿದ್ದು, ಗುರ್ಜಾಪುರ ಬ್ಯಾರೇಜ್ ತೆರೆದುಕೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.