ADVERTISEMENT

‘ಮಹಿಳೆಯರು ಸ್ವಾವಲಂಬಿಗಳಾಗಿ’

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2019, 13:01 IST
Last Updated 10 ಸೆಪ್ಟೆಂಬರ್ 2019, 13:01 IST
ರಾಯಚೂರಿನಲ್ಲಿ ಹೊಲಿಗೆ ಯಂತ್ರದ ತರಬೇತಿ ಪಡೆದ ಮಹಿಳೆಗೆ ಕೈಮಗ್ಗ ಜವಳಿ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ಹೊಸಮನಿ ಸೋಮವಾರ ಪ್ರಮಾಣ ಪತ್ರ ವಿತರಿಸಿದರು
ರಾಯಚೂರಿನಲ್ಲಿ ಹೊಲಿಗೆ ಯಂತ್ರದ ತರಬೇತಿ ಪಡೆದ ಮಹಿಳೆಗೆ ಕೈಮಗ್ಗ ಜವಳಿ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ಹೊಸಮನಿ ಸೋಮವಾರ ಪ್ರಮಾಣ ಪತ್ರ ವಿತರಿಸಿದರು   

ರಾಯಚೂರು: ಸರ್ಕಾರದ ಯೋಜನೆಗಳಿಂದ ಸಿಗುವ ಅವಕಾಶಗಳನ್ನು ಮಹಿಳೆಯರು ಬಳಸಿಕೊಂಡು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಬೇಕು ಎಂದು ಕೈಮಗ್ಗ ಜವಳಿ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ಹೊಸಮನಿ ಹೇಳಿದರು.

ನಗರದ ಸಮರ್ಥ ಹೊಲಿಗೆ ಯಂತ್ರ ತರಬೇತಿ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

ಇಲಾಖೆಯಿಂದ ಪಡೆದಿರುವ ಕೌಶಲ್ಯವನ್ನು ಸ್ವಾವಲಂಬಿ ಜೀವನಕ್ಕೆ ಬಳಸಿಕೊಳ್ಳಬೇಕು. ಬ್ಯಾಂಕಿನ ಸೌಲಭ್ಯ ಸರಿಯಾಗಿ ಉಪಯೋಗಿಸಿಕೊಂಡು ಸ್ವಂತ ದುಡಿಮೆ ಮಾಡಬೇಕು ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಮುಖ್ಯಸ್ಥೆ ವೀಣಾ ಎಚ್.ಕೊರಾಪುರ್ ಮಾತನಾಡಿ, ಕಾಲಕ್ಕೆ ತಕ್ಕಂತೆ ಮಹಿಳೆಯರು ಸಮಾಜಮುಖಿಯಾಗಿ ಬದಲಾವಣೆ ಹೊಂದುವ ಮೂಲಕ ಸ್ವಂತ ಉದ್ಯೋಗ ಮಾಡಬೇಕು ಎಂದು ಹೇಳಿದರು.

ತರಬೇತಿ ಪಡೆದುಕೊಂಡವರು ಕೌಶಲ್ಯವನ್ನು ಬಳಸಿಕೊಂಡು ಉದ್ಯಮಶೀಲರಾಗಿ ಹೊರಹೊಮ್ಮಬೇಕು. ಕುಟುಂಬದ ಆರ್ಥಕ ಸಬಲೀಕರಣಕ್ಕೆ ಉಪಯೋಗಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.