ADVERTISEMENT

ಮಾನ್ವಿ: ‘ಪಕ್ಷಿ ಸಂಕುಲದ ಉಳಿವು ಅಗತ್ಯ’

ವಿಶ್ವ ಗುಬ್ಬಚ್ಚಿ ದಿನಾಚರಣೆ, ಕೃತಕ ಗೂಡುಗಳ ವಿತರಣೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2022, 4:17 IST
Last Updated 21 ಮಾರ್ಚ್ 2022, 4:17 IST
ಮಾನ್ವಿಯಲ್ಲಿ ಭಾನುವಾರ ಪಕ್ಷಿ ಪ್ರೇಮಿ ಸಲಾವುದ್ದೀನ್ ಗುತ್ತೇದಾರ ಸಾರ್ವಜನಿಕರಿಗೆ ಗುಬ್ಬಚ್ಚಿಯ ಕೃತಕ ಗೂಡುಗಳನ್ನು ವಿತರಿಸಿದರು
ಮಾನ್ವಿಯಲ್ಲಿ ಭಾನುವಾರ ಪಕ್ಷಿ ಪ್ರೇಮಿ ಸಲಾವುದ್ದೀನ್ ಗುತ್ತೇದಾರ ಸಾರ್ವಜನಿಕರಿಗೆ ಗುಬ್ಬಚ್ಚಿಯ ಕೃತಕ ಗೂಡುಗಳನ್ನು ವಿತರಿಸಿದರು   

ಮಾನ್ವಿ: ‘ಅಳವಿನಂಚಿನಲ್ಲಿರುವ ಪ್ರಾಣಿ ಹಾಗೂ ಪಕ್ಷಿಗಳ ಸಂಕುಲದ ಉಳಿವು ಅಗತ್ಯ’ ಎಂದು ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಭಾನುವಾರ ಪಟ್ಟಣದ ಕಲ್ಮಠದ ಧ್ಯಾನ ಮಂದಿರದ ಆವರಣದಲ್ಲಿ ಪಕ್ಷಿ ಪ್ರೇಮಿ ಸಲಾವುದ್ದೀನ್ ಗುತ್ತೇದಾರ ಹಾಗೂ ಗೆಳೆಯರ ಬಳಗ ಹಮ್ಮಿಕೊಂಡಿದ್ದ ‘ವಿಶ್ವ ಗುಬ್ಬಚ್ಚಿ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬೇಸಿಗೆಯಲ್ಲಿ ಪಕ್ಷಿಗಳ ಅನುಕೂಲಕ್ಕಾಗಿ ಸಲಾವುದ್ದೀನ್ ಗುತ್ತೇದಾರ ಅವರು ತಯಾರಿಸಿರುವ ಕೃತಕ ಗೂಡುಗಳು ಹಾಗೂ ವಾಟರ್ ಫೀಡರ್‌ಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲಾಯಿತು.

ADVERTISEMENT

ಕಲ್ಮಠದ ವತಿಯಿಂದ ವಿರೂಪಾಕ್ಷ ಪಂಡಿತಾರಾಧ್ಯ ಸ್ವಾಮೀಜಿ ಅವರು ಸಲಾವುದ್ದೀನ್ ಗುತ್ತೇದಾರ ಹಾಗೂ ವಲಯ ಅರಣ್ಯಾಧಿಕಾರಿ ರಾಜೇಶ್ ನಾಯಕ ಅವರನ್ನು ಸನ್ಮಾನಿಸಿದರು.

ನೇತಾಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ಈ.ನರಸಿಂಹ, ಉಪನ್ಯಾಸಕ ರಮೇಶಬಾಬು ಯಾಳಗಿ, ಛಾಯಾಗ್ರಾಹಕ ಜಗನ್ನಾಥ ಚೌದರಿ, ವನಸಿರಿ ಫೌಂಡೇಶನ್ ತಾಲ್ಲೂಕು ಅಧ್ಯಕ್ಷ ಶರಣಬಸವ ಭೋವಿ ಹಿರೇಕೊಟ್ನೇಕಲ್, ಉಪಾಧ್ಯಕ್ಷ ಬಸವರಾಜ ನಸಲಾಪುರ, ರಾಘವೇಂದ್ರ ಬದಿ, ರಾಘವೇಂದ್ರ ದಾನಿ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.