ಲಿಂಗಸುಗೂರು: ಪಟ್ಟಣದ ಬಸವಸಾಗರ ವೃತ್ತ ಬಳಿ ಇರುವ ಖಾಸಗಿ ಆಸ್ಪತ್ರೆ ಕಟ್ಟಡದ ಮೇಲಿಂದ ಜಿಗಿಯಲು ಯತ್ನಿಸಿದ ಯುವಕನನ್ನು ಸೋಮವಾರ ಸ್ಥಳೀಯರ ರಕ್ಷಣೆ ಮಾಡಿದ್ದಾರೆ.
ಮುದಗಲ್ ಪಟ್ಟಣದ ನಿವಾಸಿಯಾದ ಜಾವೀದ್ ಪಾಷಾ ಜಿಗಿಯಲು ಯತ್ನಿಸಿದ ಯುವಕ. ಕಳೆದ ಮೂರು ದಿನಗಳ ಹಿಂದೆ ಪಟ್ಟಣದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ಬಂದಿದ್ದ. ಆದರೆ ಸೋಮವಾರ ಏಕಾಏಕಿ ಆಸ್ಪತ್ರೆಯ ಎರಡು ಅಂತಸ್ತಿನ ಕಟ್ಟಡದ ಮೇಲೆ ಏರಿ ಕೆಳಗೆ ಜಿಗಿದು ಸಾಯುವುದಾಗಿ ಜೋರಾಗಿ ಕೂಗುತ್ತಿದ್ದ. ಆಸ್ಪತ್ರೆ ಸಿಬ್ಬಂದಿ ಎಚ್ಚೆತ್ತುಕೊಂಡು ಸ್ಥಳೀಯರ ನೆರವಿನಿಂದ ಯುವಕನ ರಕ್ಷಣೆ ಮಾಡಿದ್ದಾರೆ.
ಕಟ್ಟಡವೇರಿ ಮೇಲಿನಿಂದ ಜಿಗಿಯಲು ಯತ್ನಿಸಿದ ಯುವಕನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಲಿಂಗಸುಗೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.