ADVERTISEMENT

ಕುದೂರು : ಸರ್ಕಾರಿ ಬಸ್‌ ಉರುಳಿಬಿದ್ದು 10 ಜನರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2019, 14:16 IST
Last Updated 30 ಅಕ್ಟೋಬರ್ 2019, 14:16 IST
ಮಾಗಡಿ ಸೋಲೂರು ಬಳಿ ಉರುಳಿ ಬಿದ್ದಿರುವ ಸರ್ಕಾರಿ ಬಸ್‌ ಮೇಲೆತ್ತಲಾಯಿತು
ಮಾಗಡಿ ಸೋಲೂರು ಬಳಿ ಉರುಳಿ ಬಿದ್ದಿರುವ ಸರ್ಕಾರಿ ಬಸ್‌ ಮೇಲೆತ್ತಲಾಯಿತು   

ಕುದೂರು (ಮಾಗಡಿ): ತಾಲ್ಲೂಕಿನ ಸೋಲೂರು ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸರ್ಕಾರಿ ಸಾರಿಗೆ ಸಂಸ್ಥೆಗೆ ಸೇರಿದ ಸ್ಲೀಪರ್‌ ಬಸ್‌ ಉರುಳಿಬಿದ್ದಿರುವ ಘಟನೆ ಬುಧವಾರ ಮುಂಜಾನೆ ನಡೆದಿದೆ.

ಪುತ್ತೂರಿನಿಂದ 32 ಪ್ರಯಾಣಿಕರೊಂದಿಗೆ ಬೆಂಗಳೂರಿನತ್ತ ಬರುತ್ತಿದ್ದ ಬಸ್ ವೇಗ ನಿಯಂತ್ರಣಕ್ಕಾಗಿ ಅಳವಡಿಸಲಾಗಿರುವ ಕೃತಕ ಬ್ಯಾರಿಕೇಡ್‌ ಮೂಲಕ ಹಾದುಹೋಗುವ ಸ್ಥಳದಲ್ಲಿ ಚಾಲಕ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ.

32 ಪ್ರಯಾಣಿಕರಲ್ಲಿ 2 ಚಿಕ್ಕ ಮಕ್ಕಳು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. 10 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್‌ ಚಾಲಕ ಭರತ್ ಮತ್ತು ನಿರ್ವಾಹಕ ಕೋಚಿನಾ ಪೂಜಾರಿ ಅವರು ಗಾಯಗೊಂಡಿದ್ದು, ಸೋಲೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುದೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.