ADVERTISEMENT

12 ಕುರಿಗಳು ಕಳವು

​ಪ್ರಜಾವಾಣಿ ವಾರ್ತೆ
Published 10 ಜುಲೈ 2021, 4:13 IST
Last Updated 10 ಜುಲೈ 2021, 4:13 IST

ಚನ್ನಪಟ್ಟಣ: ಮನೆಯ ಹಿತ್ತಲಿನ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ 12 ಕುರಿಗಳನ್ನು ಕಳವು ಮಾಡಿರುವ ಘಟನೆ ತಾಲ್ಲೂಕಿನ ಯಲಚಿಪಾಳ್ಯದಲ್ಲಿ ಗುರುವಾರ ರಾತ್ರಿಯಲ್ಲಿ ನಡೆದಿದೆ.

ಗ್ರಾಮದ ರೈತ ಕರಿಯಪ್ಪ ಅವರ ಮಗ ವೆಂಕಟೇಶ ಅವರು ಸಾಕಿದ್ದ ಕುರಿಗಳು ಕಳವಾಗಿವೆ. ಮನೆಗೆ ಹೊಂದಿಕೊಂಡಂತೆ ಇರುವ ಕೊಟ್ಟಿಗೆಯಲ್ಲಿ ಕಟ್ಟಿಹಾಕಿ ಮನೆ ಮಂದಿ ನಿದ್ರಿಸುತ್ತಿದ್ದ ವೇಳೆ ಕುರಿಗಳನ್ನು ಕಳವು ಮಾಡಲಾಗಿದೆ.

ಸರಕು ಸಾಗಣೆ ವಾಹನದಲ್ಲಿ ಬಂದಿದ್ದ ಕಳ್ಳರು ಮನೆ ಬಳಿ ವಾಹನ ನಿಲ್ಲಿಸಿಕೊಂಡು 12 ಕುರಿಗಳನ್ನು ತುಂಬಿಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.