ಚನ್ನಪಟ್ಟಣ: ಪಟ್ಟಣದ ಸೇವಂತ್ ಸಾಗರ್ ಅವರು ನೀಟ್ ಪರೀಕ್ಷೆಯಲ್ಲಿ (ಮೆಡಿಕಲ್) ರಾಜ್ಯಕ್ಕೆ 31 ನೇ ರ್ಯಾಂಕ್ ಗಳಿಸಿ ರಾಮನಗರ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿ ಸಾಧನೆ ಮಾಡಿದ್ದಾರೆ.
ಮೇ 5 ರಂದು ನಡೆದಿದ್ದ ನೀಟ್ ಪರೀಕ್ಷೆಯಲ್ಲಿ ಈ ಸಾಧನೆ ಮಾಡಿರುವ ಇವರು, ಪಶು ವೈದ್ಯಕೀಯದಲ್ಲಿ 67 ರ್ಯಾಂಕ್ , ಬಿ.ಎನ್.ವೈ.ಎಸ್. 72ನೇ ರ್ಯಾಂಕ್, ಬಿ ಫಾರ್ಮಸಿಯಲ್ಲಿ 135 ನೇ ರ್ಯಾಂಕ್, ಮತ್ತು ಎಂಜಿನಿಯರಿಂಗ್ ನಲ್ಲಿ 521 ನೇ ರ್ಯಾಂಕ್ ಪಡೆದಿದ್ದಾರೆ.
ಸಾಗರ್ ಅವರು ತಾಲ್ಲೂಕಿನ ಅಕ್ಕೂರು ಹೊಸಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಮುತ್ತುರಾಜು ಮತ್ತು ಪದ್ಮಾವತಿ ಅವರ ಪುತ್ರ. ಸಾಗರ್ ಸಾಧನೆಗೆ ಗಣ್ಯರು ಮೆಚ್ಚುಗೆ ಸೂಚಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.