ಚನ್ನಪಟ್ಟಣ: ಕಲ್ಪಶ್ರೀ ಪರ್ ಫಾರ್ಮಿಂಗ್ ಆರ್ಟ್ ಸೆಂಟರ್ ಟ್ರಸ್ಟ್ನಿಂದ ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಮೂರು ದಿನಗಳ ಕಾಲ ಅಖಿಲ ಭಾರತ ನೃತ್ಯೋತ್ಸವ ‘ಕಲ್ಪಶ್ರೀ ನಾಟ್ಯಾಂಜಲಿ' ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ನಡೆದ ನೃತ್ಯೋತ್ಸವದಲ್ಲಿ ಭರತನಾಟ್ಯ, ಕೂಚುಪುಡಿ, ಜಾನಪದ ನೃತ್ಯ ಹಾಗೂ ಇತರ ಭಾರತೀಯ ನೃತ್ಯ ಪ್ರದರ್ಶನವನ್ನು ಹೈದರಾಬಾದ್, ಬೆಂಗಳೂರು, ಚನ್ನೈ, ವಿಶಾಖಪಟ್ಟಣ ಹಾಗೂ ಅಮೆರಿಕ ಮತ್ತು ದುಬೈ ದೇಶದಿಂದ ಬಂದ ನೃತ್ಯ ಕಲಾವಿದರು ಹಾಗೂ ಕಲ್ಪಶ್ರೀ ಸಂಸ್ಥೆ ವಿದ್ಯಾರ್ಥಿಗಳು ಪ್ರದರ್ಶನ ನೀಡಿದರು.
ನೃತ್ಯೋತ್ಸವದಲ್ಲಿ ಅಂತರರಾಷ್ಟ್ರೀಯ ನೃತ್ಯ ಕಲಾವಿದರಾದ ಡಿ.ಕೇಶವ, ಶ್ರೀಧರ್ ಜೈನ್, ಕಲಾವಿದರಾದ ಸೌಮ್ಯರಾಣಿ ಮೈಸೂರು, ಜ್ಯೋತಿ ಹೆಗ್ಗಡೆ, ಅನನ್ಯ ಭಾಗವಹಿಸಿದ್ದರು ಎಂದು ಸಂಸ್ಥೆ ಕಾರ್ಯದರ್ಶಿ ಎಂ.ಸಿ.ಸುಜೇಂದ್ರಬಾಬು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.