ADVERTISEMENT

ಮಾಗಡಿ: ಅನಾಥ ಮಕ್ಕಳ ಶಿಕ್ಷಣಕ್ಕೆ ನೆರವು

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 4:13 IST
Last Updated 22 ಜೂನ್ 2021, 4:13 IST
ಮಾಗಡಿ ಪಟ್ಟಣದ 14ನೇ ವಾರ್ಡ್‌ನಲ್ಲಿ ಮುಖಂಡ ಸಾಮ್ರಾಟ್‌ ಗೌಡ ದಿನಸಿ ಕಿಟ್‌ ವಿತರಿಸಿದರು
ಮಾಗಡಿ ಪಟ್ಟಣದ 14ನೇ ವಾರ್ಡ್‌ನಲ್ಲಿ ಮುಖಂಡ ಸಾಮ್ರಾಟ್‌ ಗೌಡ ದಿನಸಿ ಕಿಟ್‌ ವಿತರಿಸಿದರು   

ಮಾಗಡಿ: ‘ಹಂಚಿ ತಿನ್ನುವುದರಿಂದ ಜೀವನದಲ್ಲಿ ಆನಂದ ಸಿಗುತ್ತದೆ’ ಎಂದು ಯುವ ಭಾರತ ಸಂಸ್ಥಾಪಕ ಅಧ್ಯಕ್ಷ ಸಾಮ್ರಾಟ್‌ ಗೌಡ ತಿಳಿಸಿದರು.

ಪಟ್ಟಣದ 14ನೇ ವಾರ್ಡ್‌ನ ಬಡವರಿಗೆ ದಿನಸಿ ಕಿಟ್ ವಿತರಿಸಿ ಅವರು ಮಾತನಾಡಿದರು.

‘ಕೊರೊನಾ ಸೋಂಕಿನ ಕಂಟಕ ಮುಗಿದು ಜನಸಾಮಾನ್ಯರು ಬದುಕು ಸಾಮಾನ್ಯ ಸ್ಥಿತಿಗೆ ಬರುವವರೆಗೂ ದಿನಸಿ ಕಿಟ್‌ ವಿತರಿಸುತ್ತೇವೆ. ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ಶಿಕ್ಷಣ ಕೊಡಿಸುತ್ತೇನೆ’ ಎಂದರು.

ADVERTISEMENT

ಪುರಸಭಾ ಉಪಾಧ್ಯಕ್ಷ ರಹಮತ್‌, ಸದಸ್ಯರಾದ ರಿಯಾಜ್ ಅಹಮದ್, ಶಬ್ಬೀರ್‌ಪಾಷಾ, ಮಾಜಿ ಸದಸ್ಯ ಶಿವಕುಮಾರ್ ಗಾಣಿಗ, ಸವಿತಾ ಸಮಾಜದ ಜಿಲ್ಲಾ ಉಪಾಧ್ಯಕ್ಷ ಎಂ. ಮುನಿಕೃಷ್ಣ, ರಾಜ್ಯ ಕಾರ್ಮಿಕ ಮುಖಂಡ ಬಸವರಾಜ್ ಇದ್ದರು. 200 ಜನರಿಗೆ ದಿನಸಿ ಕಿಟ್‌ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.