ADVERTISEMENT

ಮೇಕೆದಾಟು ಪಾದಯಾತ್ರೆಗೆ ಬಂದವರಿಗೆ ಉಚಿತ ಪೆಟ್ರೋಲ್

​ಪ್ರಜಾವಾಣಿ ವಾರ್ತೆ
Published 9 ಜನವರಿ 2022, 11:31 IST
Last Updated 9 ಜನವರಿ 2022, 11:31 IST
ಪೆಟ್ರೋಲ್ ತುಂಬಿಸಿಕೊಳ್ಳಲು‌ ಮುಗಿಬಿದ್ದ ಜನ
ಪೆಟ್ರೋಲ್ ತುಂಬಿಸಿಕೊಳ್ಳಲು‌ ಮುಗಿಬಿದ್ದ ಜನ   

ರಾಮನಗರ: ಸಂಗಮದಲ್ಲಿ ಭಾನುವಾರ ಕಾಂಗ್ರೆಸ್ ನೇತೃತ್ವದಲ್ಲಿ ಆರಂಭಗೊಂಡ ಮೇಕೆದಾಟು ಪಾದಯಾತ್ರೆಗೆ ಬರುವವರಿಗೆ ಉಚಿತ ಪೆಟ್ರೋಲ್ ವ್ಯವಸ್ಥೆ‌‌ ಮಾಡಲಾಗಿತ್ತು. ಪೆಟ್ರೋಲ್ ತುಂಬಿಸಿಕೊಳ್ಳಲು‌ ಜನರು‌ ಮುಗಿಬಿದ್ದರು.

ಗ್ರಾಮ ಪಂಚಾಯಿತಿಗಳಲ್ಲಿ ಈ‌ ಮೊದಲೇ ಕೂಪನ್‌ಗಳನ್ನು ವಿತರಿಸಲಾಗಿತ್ತು. ಆ ಕೂಪನ್ ತಂದವರಿಗೆ ಬಂಕ್‌ಗಳಲ್ಲಿ 300-500 ರೂಪಾಯಿವರೆಗೆ ಪೆಟ್ರೋಲ್ ನೀಡಲಾಯಿತು. ಕನಕಪುರ-ಸಂಗಮ‌ ರಸ್ತೆಯಲ್ಲಿನ ಬಹುತೇಕ‌ ಪೆಟ್ರೋಲ್ ಬಂಕ್‌ಗಳು ಗ್ರಾಹಕರಿಂದ ತುಂಬಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT