ADVERTISEMENT

ಜಿಂಕೆ ಬೇಟೆ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2019, 20:30 IST
Last Updated 8 ಡಿಸೆಂಬರ್ 2019, 20:30 IST
ಜಿಂಕೆಯನ್ನು ಬೇಟೆಯಾಡಿ ಆರೋಪಿ ಸುರೇಶ್‌
ಜಿಂಕೆಯನ್ನು ಬೇಟೆಯಾಡಿ ಆರೋಪಿ ಸುರೇಶ್‌   

ಸಾತನೂರು (ಕನಕಪುರ): ಇಲ್ಲಿನ ಸಾತನೂರು ಹೋಬಳಿ ಕಾಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೂಹಳ್ಳಿ ಶಾಖೆಯ ಹರಿಹರ ಗಸ್ತಿನ ಅರಣ್ಯ ಪ್ರದೇಶದಲ್ಲಿ ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ಸಾತನೂರು ಹೋಬಳಿ ಸಂಬಾಪುರ ಗ್ರಾಮದ ನಾಥೇಗೌಡರ ಮಗ ಸುರೇಶ್‌ ಬಂಧಿತ ಆರೋಪಿ. ಸಂಗಮ ವನ್ಯಜೀವ ವಲಯದಲ್ಲಿನ ಅರಣ್ಯ ಪ್ರದೇಶದ ತಟ್ಟೆಹಳ್ಳದಲ್ಲಿ ಜಿಂಕೆಯನ್ನು ಬೇಟೆಯಾಡಿ ಅದರ ಮಾಂಸವನ್ನು ಗೋಣಿಚೀಲದಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದ.

ಎಸಿಎಫ್‌ ರಾಜು, ಆರ್‌ಎಫ್‌ಒ ಕಿರಣ್‌ಕುಮಾರ್‌ ಕರತಂಗಿ ಮಾರ್ಗದರ್ಶನದಲ್ಲಿ ಡಿಆರ್‌ಎಫ್‌ಒ ಅನಿಲ್‌ಕುಮಾರ್‌, ಅರಣ್ಯ ರಕ್ಷಕ ಶರಣಪ್ಪ, ಅರಣ್ಯ ಕಾವಲುಗಾರರಾದ ರವಿ ಮತ್ತು ರವಿನಾಯ್ಕ್‌ ಕಾರ್ಯಾಚರಣೆ ನಡೆಸಿದ್ದರು.

ADVERTISEMENT

ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.