ADVERTISEMENT

ಕನಕಪುರ: ಗಾಂಜಾ ಮಾರುತ್ತಿದ್ದ ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2020, 7:50 IST
Last Updated 2 ಸೆಪ್ಟೆಂಬರ್ 2020, 7:50 IST
ಆರೋಪಿಗಳಿಂದ ಗಾಂಜಾ ಸೊಪ್ಪು ವಶಪಡಿಸಿಕೊಂಡಿರುವ ಪೊಲೀಸರು 
ಆರೋಪಿಗಳಿಂದ ಗಾಂಜಾ ಸೊಪ್ಪು ವಶಪಡಿಸಿಕೊಂಡಿರುವ ಪೊಲೀಸರು    

ಕನಕಪುರ: ತೋಟವೊಂದರದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಮೇರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಕಗ್ಗಲಿಪುರ ಗ್ರಾಮದ ಅರುಣ್‌ ಅಲಿಯಾಸ್‌ ಬಾಬು (22), ಗುಳಕಮಲೆ ಸಿದ್ದರಾಜನಾಯ್ಕ್‌ (22) ಬಂಧಿತ ಆರೋಪಿಗಳು.

ಗುಳಕಮಲೆ ಬಳಿಯ ಬನ್ನೇರುಘಟ್ಟ ರಸ್ತೆ ವಿಜಯ್‌ಕುಮಾರ್‌ ಎಂಬುವರ ತೋಟದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ತಲಘಟ್ಟಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ADVERTISEMENT

ಬಂಧಿತರಿಂದ ಗಾಂಜಾ ಸೊಪ್ಪು ಮತ್ತು ನಗದು ವಶಕ್ಕೆ ಪಡೆದಿರುವ ಎಸ್‌ಐ ವೆಂಕಟೇಶ್,‌ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.