ಕನಕಪುರ: ತಾಲ್ಲೂಕಿನ ತೇರಿನದೊಡ್ಡಿ ಗ್ರಾಮದ ತೋಟಗಳಿಗೆ ಸೋಮವಾರ ರಾತ್ರಿ ನುಗ್ಗಿದ ಒಂಟಿ ಸಲಗ ಬಾಳೆ ಮತ್ತು ತೆಂಗಿನ ಗಿಡಗಳನ್ನು ನಾಶಗೊಳಿಸಿದೆ.
‘ಬೆಳಗ್ಗೆ ಜಮೀನ ಕಡೆ ಹೋದಗ ಆನೆ ಬಾಳೆ ಗಿಡಗಳ ಪಕ್ಕದಲ್ಲೇ ನಿಂತಿತ್ತು. ಅದನ್ನು ನೋಡಿ ಭಯದಿಂದ ಓಡಿ ಬಂದೆ’ ಎಂದು 70 ವರ್ಷದ ಲಕ್ಷ್ಮಯ್ಯ ಹೇಳಿದರು.
ಅರಣ್ಯ ಇಲಾಖೆಗೆ ಒಮಟಿ ಸಲಗದ ಓಡಾಟದ ಬಗ್ಗೆ ಮಾಹಿತಿ ನೀಡಿದ್ದೇವೆ. ಯಾವುದೆ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.