ADVERTISEMENT

ಕನಕಪುರ: ಕೌಟುಂಬಿಕ ಕಲಹ ವ್ಯಕ್ತಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2022, 7:49 IST
Last Updated 9 ಮಾರ್ಚ್ 2022, 7:49 IST
ಕುಮಾರ್‌
ಕುಮಾರ್‌   

ಕನಕಪುರ: ಕೌಟುಂಬಿಕ ಕಲಹದಿಂದ ಬೇಸತ್ತು ವ್ಯಕ್ತಿಯೊಬ್ಬರು ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿ ರುವುದು ಘಟನೆ ತಾಲ್ಲೂಕಿನ ಕೊಟ್ಟಗಾಳು ಬಳಿಯ ಬೆಳಗುಳಿ ಕೆರೆಯ ಹಳ್ಳದಲ್ಲಿ ಮಂಗಳವಾರ ನಡೆದಿದೆ.

ಮುರಕಣಿ ಗ್ರಾಮದ ಕಾಳೇಗೌಡರ ಮಗ ಕುಮಾರ್‌ (53) ಮೃತಪಟ್ಟವರು.

ಪತ್ನಿಯನ್ನು ತವರು ಮನೆಗೆ ಬಿಟ್ಟು ಬರುವುದಾಗಿ ಭಾನುವಾರ ಬೆಳಿಗ್ಗೆ ಹೋದವರು ವಾಪಸ್‌ ಮನೆಗೆ ಬಂದಿರಲಿಲ್ಲ.ಸೋಮವಾರ ಬೆಳಗುಳಿ ಕೆರೆಯ ಸಮೀಪ ಬೈಕ್‌ ಸಿಕ್ಕಿದ್ದು ಅದನ್ನು ಪೊಲೀಸರು ಯಾರೋ ನಿಲ್ಲಿಸಿ ಹೋಗಿದ್ದಾರೆ ಎಂದು ಠಾಣೆಗೆ ತಂದಿದ್ದಾರೆ.ಮಂಗಳವಾರ ಬೆಳಿಗ್ಗೆ ಕೆರೆಯ ಹಳ್ಳದಲ್ಲಿರುವ ನೀರಿನಲ್ಲಿ ಶವವೊಂದು ತೇಲುತ್ತಿದೆ ಎಂದು ಸ್ಥಳೀಯರು ಠಾಣೆಗೆ ಮಾಹಿತಿ ನೀಡಿದ್ದಾರೆ.

ADVERTISEMENT

ಗ್ರಾಮಾಂತರ ಠಾಣೆಗೆ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.