ADVERTISEMENT

ನಿವೃತ್ತ ನ್ಯಾಯಾಧೀಶರಿಗೆ ಬೀಳ್ಕೊಡುಗೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 14:41 IST
Last Updated 1 ಆಗಸ್ಟ್ 2019, 14:41 IST
ಕನಕಪುರ ನಗರದ ನ್ಯಾಯಾಲಯದಲ್ಲಿ ನಿವೃತ್ತರಾದ ವೇಣುಗೋಪಾಲ್‌ ಅವರನ್ನು ಸನ್ಮಾನಿಸುತ್ತಿರುವುದು
ಕನಕಪುರ ನಗರದ ನ್ಯಾಯಾಲಯದಲ್ಲಿ ನಿವೃತ್ತರಾದ ವೇಣುಗೋಪಾಲ್‌ ಅವರನ್ನು ಸನ್ಮಾನಿಸುತ್ತಿರುವುದು   

ಕನಕಪುರ: ನ್ಯಾಯಾಧೀಶರಾದವರು ತಮ್ಮ ವೃತ್ತಿ ಜೀವನದಲ್ಲಿ ಕುಟುಂಬಕ್ಕೆ ಹೆಚ್ಚಿನ ಕಾಲಾವಕಾಶ ಕೊಡಲು ಆಗುವುದಿಲ್ಲವೆಂದು ಹಿರಿಯ ಸಿವಿಲ್‌ ಶ್ರೇಣಿ ನ್ಯಾಯಾಲಯದ ನಿವೃ‌ತ್ತ ನ್ಯಾಯಾಧೀಶ ಡಿ.ವೇಣುಗೋಪಾಲ್‌ ತಿಳಿಸಿದರು.

ನಗರದ ನ್ಯಾಯಾಲಯದ ಆವರಣದಲ್ಲಿ ಅವರಿಗೆ ವಕೀಲರ ಸಂಘದಿಂದ ಬುಧವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

‘ಇಲ್ಲಿ 2 ವರ್ಷಕ್ಕೂ ಹೆಚ್ಚಿನ ಕಾಲ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ವಕೀಲರು ಮತ್ತು ನ್ಯಾಯಾಲಯದ ಸಿಬ್ಬಂದಿ ತೋರಿದ ಅಭಿಮಾನಕ್ಕೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದ ಅವರು ಮುಂದಿನ ಜೀವನವನ್ನು ಕುಟುಂಬದ ಸದಸ್ಯರೊಂದಿಗೆ ಕಳೆಯುತ್ತೇನೆ’ ಎಂದರು.

ADVERTISEMENT

ವಕೀಲರ ಸಂಘದ ಅಧ್ಯಕ್ಷ ಕೆ.ಎಸ್‌. ಗಿರಿಧರ್‌ ಮಾತನಾಡಿದರು.

ನ್ಯಾಯಾಧೀಶರಾದ ನಿಂಬಣ್ಣ ಕಲ್ಕಣಿ, ಹನುಮಂತ, ಸಂತೋಷ್‌ಕುಮಾರ್‌, ಹಿರಿಯ ವಕೀಲರಾದ ಎಲ್‌.ಪುಟ್ಟಮಾದಯ್ಯ, ರಾಮಚಂದ್ರ, ದೊಡ್ಡವೀರೇಗೌಡ, ಎ.ಆರ್‌.ಖಾನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.