ADVERTISEMENT

ಬೆಂಕಿ ಆಕಸ್ಮಿಕ: ಮನೆಗೆ ಹಾನಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2019, 15:39 IST
Last Updated 20 ಅಕ್ಟೋಬರ್ 2019, 15:39 IST
ಬೆಂಕಿಗೆ ಆಹುತಿಯಾದ ವಸ್ತುಗಳು
ಬೆಂಕಿಗೆ ಆಹುತಿಯಾದ ವಸ್ತುಗಳು   

ರಾಮನಗರ: ತಾಲ್ಲೂಕಿನ ಕೈಲಾಂಚ ಹೋಬಳಿಯ ಲಕ್ಕೋಜನಹಳ್ಳಿಯಲ್ಲಿ ಭಾನುವಾರ ಸಂಜೆ ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಒಳಗೆ ಇದ್ದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.

ಗ್ರಾಮದ ಗೌರಮ್ಮ ಪುಟ್ಟಸ್ವಾಮಯ್ಯ ಅವರು ಮನೆಗೆ ಬೀಗ ಹಾಕಿ ರೇಷ್ಮೆ ಸೊಪ್ಪು ತರಲು ಹೊಲಕ್ಕೆ ತೆರಳಿದ್ದರು. ಈ ಸಂದರ್ಭ ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಮನೆಯ ಛಾವಣಿಯ ಜೊತೆಗೆ 50 ಸಾವಿರ ನಗದು, ಟಿ.ವಿ. ಫ್ರಿಜ್‌, ಕಾಗದ ಪತ್ರಗಳೂ ಬೆಂಕಿಯಿಂದಾಗಿ ಸುಟ್ಟುಹೋಗಿವೆ. ಬೆಂಕಿ ಕಾಣಿಸಿಕೊಳ್ಳುತ್ತಲೇ ಅದನ್ನು ನಂದಿಸಲು ಅಕ್ಕಪಕ್ಕದ ಮನೆಯವರು ಮುಂದಾಗಿದ್ದು ಫಲ ನೀಡಲಿಲ್ಲ.

ರಾಮನಗರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.