ರಾಮನಗರ: ಜಿಲ್ಲೆಯಲ್ಲಿ ಇಬ್ಬರು ಕೊರೊನಾ ಶಂಕಿತರ ಗಂಟಲು ದ್ರವ ಹಾಗೂ ರಕ್ತವನ್ನು ಆರೋಗ್ಯ ಇಲಾಖೆಯು ಪರೀಕ್ಷೆಗೆ ಕಳುಹಿಸಿದ್ದು, ಆರೋಗ್ಯ ಇಲಾಖೆಯು ಅವರ ಮೇಲೆ ನಿಗಾ ವಹಿಸಿದೆ.
ಕೇರಳದ ಕೂಲಿ ಕಾರ್ಮಿಕ ಹಾಗೂ ಬೆಂಗಳೂರಿನಲ್ಲಿ ಕಾರ್ ಓಡಿಸುತ್ತಿದ್ದ ಕನಕಪುರ ವ್ಯಕ್ತಿಯನ್ನು ಸೋಮವಾರ ತಪಾಸಣೆಗೆ ಒಳಪಡಿಸಲಾಯಿತು. ಇವರಿಬ್ಬರ ಮಾದರಿಯನ್ನು ಸಂಗ್ರಹಿಸಲಾಯಿತು. ಇಬ್ಬರಲ್ಲೂ ಜ್ವರ ಇರಲಿಲ್ಲ. ಆದರೆ ಸೋಂಕಿತ ಪ್ರದೇಶಗಳಲ್ಲಿ ಇಬ್ಬರೂ ಓಡಾಡಿದ್ದರು ಎನ್ನುವ ಕಾರಣಕ್ಕೆ ತಪಾಸಣೆಗೆ ಒಳಪಡಿಸಲಾಯಿತು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.