ADVERTISEMENT

ಕನಕಪುರ: ಉಕ್ಕಿದ ಅರ್ಕಾವತಿ ಮುಳುಗಿದ ಸೇತುವೆಗಳು

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2022, 2:44 IST
Last Updated 28 ಆಗಸ್ಟ್ 2022, 2:44 IST
ರಾಮನಗರ ರಸ್ತೆಯಿಂದ ಹೋಗಲು ಅರ್ಕಾವತಿ ನದಿಗೆ ನಿರ್ಮಿಸಿದ್ದ ಕಿರುಸೇತುವೆ ಪ್ರವಾಹದಲ್ಲಿ ಮುಚ್ಚಿಹೋಗಿರುವುದು
ರಾಮನಗರ ರಸ್ತೆಯಿಂದ ಹೋಗಲು ಅರ್ಕಾವತಿ ನದಿಗೆ ನಿರ್ಮಿಸಿದ್ದ ಕಿರುಸೇತುವೆ ಪ್ರವಾಹದಲ್ಲಿ ಮುಚ್ಚಿಹೋಗಿರುವುದು   

ಕನಕಪುರ: ಕಳೆದ ಮೂರು ದಿನಗಳಿಂದ ಜೋರಾಗಿ ಸುರಿಯುತ್ತಿರುವ ಮಳೆಯಿಂದ ಅರ್ಕಾವತಿ ನದಿಯಲ್ಲಿ ಶನಿವಾರ ಬೆಳಿಗ್ಗೆ ಪ್ರವಾಹ ಉಕ್ಕಿ ಹರಿಯುತ್ತಿದ್ದು ನದಿಗೆ ಅಡ್ಡಲಾಗಿ ಕಟ್ಟಿದ್ದ ಕಿರು ಸೇತುವೆಗಳು ನೀರಿನಲ್ಲಿ ಮುಳುಗಿವೆ.

ತಾಲ್ಲೂಕಿನ ಅಳ್ಳಿಮಾರನಹಳ್ಳಿ ಬಳಿ ಅರ್ಕಾವತಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಕೋನಮಾನಹಳ್ಳಿ ಮತ್ತು ಕುಂತಿಕಲ್ ದೊಡ್ಡಿ ಗ್ರಾಮಗಳ ಸೇತುವೆಗಳ ಮೇಲೆ ಅಪಾರ ನೀರು ಹರಿಯುತ್ತಿದೆ. ಇದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿವೆ. ಸೇತುವೆಗಳ ಮೇಲೆ ನೀರು ಹರಿಯುತ್ತಿರು ಕಾರಣ ಹಲವು ಗ್ರಾಮಗಳ ನಡುವೆ ಸಂಪರ್ಕ ಕಡಿತಗೊಂಡಿವೆ. ಇನ್ನೂ 10–15 ಕಿ.ಮೀ ಬಳಸಿಕೊಂಡು ರಾಮನಗರ ಮತ್ತು ಕನಕಪುರಕ್ಕೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಕೋನಮಾನಹಳ್ಳಿ ಮತ್ತು ಕುಂತಿಕಲ್ ದೊಡ್ಡಿ ಗ್ರಾಮಗಳ ನಡುವಿನ ಕಿರು ಸೇತುವೆ ಕೂಡ ಜಲಾವೃತ್ತಗೊಂಡಿದೆ. ಮಾವತ್ತೂರು ಕೆರೆ ಕೋಡಿ ಹರಿಯುತ್ತಿದ್ದು ಆಡನಕುಪ್ಪೆ ಮತ್ತು ಬೂದುಗುಪ್ಪೆ ಗ್ರಾಮಗಳ ಕಿರು ಸೇತುವೆ ಸಂಪೂರ್ಣ ಮುಳುಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT