ADVERTISEMENT

ಕನ್ನಡ ಧಮನಿಯಲ್ಲಿ ಹರಿಯುತ್ತಿರುವ ಶಕ್ತಿ: ಸಿಂ.ಲಿಂ. ನಾಗರಾಜು

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2020, 2:34 IST
Last Updated 2 ನವೆಂಬರ್ 2020, 2:34 IST
ಚನ್ನಪಟ್ಟಣದಲ್ಲಿ ಕಸಾಪದಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕುವೆಂಪು ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲಾಯಿತು
ಚನ್ನಪಟ್ಟಣದಲ್ಲಿ ಕಸಾಪದಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕುವೆಂಪು ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲಾಯಿತು   

ಚನ್ನಪಟ್ಟಣ: ಕನ್ನಡ ಬರೀ ಭಾಷೆಯಲ್ಲ‌. ನಮ್ಮ ದೇಹದ ಧಮನಿ, ಧಮನಿಗಳಲ್ಲಿ ಹರಿಯುತ್ತಿರುವ ಶಕ್ತಿ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸಿಂ.ಲಿಂ. ನಾಗರಾಜು ಅಭಿಪ್ರಾಯಪಟ್ಟರು.

ಪಟ್ಟಣದ ಗಾಂಧಿಭವನದ ಕುವೆಂಪು ಪ್ರತಿಮೆ ಬಳಿ ತಾಲ್ಲೂಕು ಕಸಾಪ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅನ್ನ ಕೊಟ್ಟಂತಹ, ಬದುಕು ಕಲಿಸಿದ ಭಾಷೆ ಕನ್ನಡ. ಕನ್ನಡವಿಲ್ಲದೆ ನಾವಿಲ್ಲ. ಕನ್ನಡ ಭಾಷೆ ದೈಹಿಕವಾಗಿ, ಮಾನಸಿಕವಾಗಿ ಎಲ್ಲ ರೀತಿಯಲ್ಲೂ ನಮ್ಮನ್ನು ಆವರಿಸಿದೆ ಎಂದರು.

ಕನ್ನಡ ಮಿತ್ರ ಸಂಘದ ಅಧ್ಯಕ್ಷ ಎಂ.ಸಿ. ಮಲ್ಲಯ್ಯ ಮಾತನಾಡಿ, ಎರಡು ಸಾವಿರ ವರ್ಷಗಳಿ
ಗಿಂತಲೂ ಪ್ರಾಚೀನವಾದ ಕನ್ನಡ ಭಾಷೆಯನ್ನು ಎಲ್ಲರೂ ಸುಲಲಿತವಾಗಿ ಕಲಿಯಬಹುದು. ಸಾವಿರಾರು ಪರಭಾಷಿಕರು ಕರ್ನಾಟಕದಲ್ಲಿ ನೆಲೆಸಿ ನಮ್ಮ ಭಾಷೆ ಕಲಿತು ಮಾತೃಭಾಷೆಯ ರೀತಿ ಬಳಸುತ್ತಿರುವುದನ್ನು ಗಮನಿಸಬಹುದು ಎಂದರು.

ADVERTISEMENT

ತಾಲ್ಲೂಕು ಕಸಾಪ ಅಧ್ಯಕ್ಷ ಮತ್ತೀಕೆರೆ ಬಿ. ಚಲುವರಾಜು ಮಾತನಾಡಿ, ಕನ್ನಡಿಗರು ನವೆಂಬರ್ ತಿಂಗಳಿಗೆ ಸೀಮಿತವಾಗಿರದೆ ವರ್ಷಪೂರ್ತಿ ಕನ್ನಡತನವನ್ನು ಮೆರೆದಾಗ ಕನ್ನಡ ರಾಜ್ಯೋತ್ಸವಕ್ಕೆ ಸಾರ್ಥಕತೆ ಸಿಗುತ್ತದೆ. ಸರ್ಕಾರ ಕನ್ನಡಕ್ಕೆ ಹೆಚ್ಚಿನ ಒತ್ತು ಕೊಡಬೇಕು. ರಾಜ್ಯದ ಆಡಳಿತ ಭಾಷೆಯಾಗಿರುವ ಕನ್ನಡವನ್ನು ಎಲ್ಲ ಇಲಾಖೆಗಳಲ್ಲೂ ಕಡ್ಡಾಯವಾಗಿ ಅನುಸರಿಸುವಂತೆ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಪತ್ರಕರ್ತರಾದ ಸು.ತ. ರಾಮೇಗೌಡ, ಗೋ.ರಾ. ಶ್ರೀನಿವಾಸ್, ಭಾವಿಪ ಕಾರ್ಯದರ್ಶಿ ಬಿ.ಎನ್. ಕಾಡಯ್ಯ, ಸಾಹಿತಿ ಎಲೆಕೇರಿ ಶಿವರಾಂ, ಶಿಕ್ಷಕರಾದ ಸಿ.ಎಸ್. ಸಿದ್ದಲಿಂಗಯ್ಯ, ಎಲೆಕೇರಿ ಡಿ. ರಾಜಶೇಖರ್, ನಿವೃತ್ತ ಶಿಕ್ಷಕ ಎಂ. ಶಿವರಾಮಯ್ಯ, ಎಸ್.ಡಿ.ಎಂ.ಸಿ. ಸಮನ್ವಯ ವೇದಿಕೆ ಅಧ್ಯಕ್ಷ ಶಂಭುಗೌಡ, ಮತ್ತೀಕೆರೆ ವಿ.ಎಸ್.ಎಸ್.ಎನ್. ನಿರ್ದೇಶಕ ಎಚ್.ಆರ್. ರಮೇಶ್, ತಾಲ್ಲೂಕು ಕಸಾಪ ಕೋಶಾಧ್ಯಕ್ಷ ಶ್ರೀನಿವಾಸ ರಾಂಪುರ, ಕಸಾಪ ಕಸಬಾ ಹೋಬಳಿ ಅಧ್ಯಕ್ಷ ಪುಟ್ಟರಾಜು, ಗಾಯಕ ಕೆ.ಎಚ್. ಕುಮಾರ್, ಕಸಾಪ ಸದಸ್ಯರಾದ ನಾರಾಯಣಮೂರ್ತಿ, ಎನ್. ಶಂಕರ್, ಲಕ್ಷ್ಮಣ್, ಶಂಕರ್ ಬಾಬು, ಶಿವಕುಮಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.