ADVERTISEMENT

ಯೋಗೇಶ್ವರ್‌ಗೆ ಏನು ಮಾತನಾಡಬೇಕು ಎಂಬ ಪರಿಜ್ಞಾನ ಇಲ್ಲ: ಕುಮಾರಸ್ವಾಮಿ ತಿರುಗೇಟು

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 7:30 IST
Last Updated 23 ಜುಲೈ 2021, 7:30 IST
ಎಚ್.ಡಿ.‌ ಕುಮಾರಸ್ವಾಮಿ
ಎಚ್.ಡಿ.‌ ಕುಮಾರಸ್ವಾಮಿ    

ರಾಮನಗರ: ‘ಆ ವ್ಯಕ್ತಿಗೆ ಏನು ಮಾತನಾಡಬೇಕು ಎಂಬ ಪರಿಜ್ಞಾನ ಇಲ್ಲ. ಅಂತಹವರ ಬಗ್ಗೆ ನಾನೇನು ಮಾತನಾಡಲಿ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.‌ ಕುಮಾರಸ್ವಾಮಿ ಸಚಿವ ಸಿ.ಪಿ. ಯೋಗೇಶ್ವರ್ ಹೇಳಿಕೆಗೆ ತಿರುಗೇಟು ನೀಡಿದರು.

‘ಕುಮಾರಸ್ವಾಮಿ ಅವರು ಕೆಲಸ ಆಗಬೇಕಾದಾಗ ಯಡಿಯೂರಪ್ಪ ಬಳಿ ಹೋಗುತ್ತಾರೆ. ನಂತರ ಅವರನ್ನೇ ಟೀಕಿಸುತ್ತಾರೆ. ಹೀಗಾಗಿ ಯಡಿಯೂರಪ್ಪ ಅವರಿಗೆ ಕುಮಾರಸ್ವಾಮಿ ಯನ್ನು ದೂರ ಇಡಿ ಎಂದಿದ್ದೆ’ ಎಂಬ ಯೋಗೇಶ್ವರ್ ಹೇಳಿಕೆ‌ ಕುರಿತು ಅವರು ಶುಕ್ರವಾರ ರಾಮನಗರದಲ್ಲಿ ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡಿದರು.

ನಾನು ಮೈಷುಗರ್ ಕಾರ್ಖಾನೆಯನ್ನು ಖಾಸಗಿಯವರಿಗೆ ಕೊಡಬೇಡಿ ಎಂದು ಹೇಳಲು ಮುಖ್ಯಮಂತ್ರಿ ಬಳಿ ಹೋಗಿದ್ದೆ. ರಾಮನಗರ ರೇಷ್ಮೆ ಮಾರುಕಟ್ಟೆ‌ ವಿಚಾರವಾಗಿ‌ ವಿಧಾನಸೌಧಕ್ಕೂ ಹೋಗಿದ್ದೆ. ಆದರೆ ವೈಯಕ್ತಿಕ ಕೆಲಸಕ್ಕಾಗಿ ಯಾವ ಸಿ.ಎಂ. ಹತ್ತಿರವೂ ಹೋಗಿಲ್ಲ. ಯಾರ ಬಳಿಯೂ ರಾಜಿ ಆಗಿಲ್ಲ. ಇಂತಹ ವ್ಯಕ್ತಿಗಳಿಂದ ನಾನು ರಾಜಕೀಯ ಕಲಿಯಬೇಕಿಲ್ಲ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.