ರಾಮನಗರ: ತಾಲ್ಲೂಕಿನ ಕಟಮಾನದೊಡ್ಡಿ ಗ್ರಾಮದ ಮನೆಯೊಂದರ ಕೊಟ್ಟಿಗೆಯಲ್ಲಿ ಕಟ್ಟಿದ್ದ ಕರುವಿನ ಮೇಲೆ ಸೋಮವಾರ ಮುಂಜಾನೆ ಮೂರರ ವೇಳೆಗೆ ಚಿರತೆ ದಾಳಿ ಮಾಡಿದೆ.
ದೇಸಪ್ಪ ಎಂಬುವರ ಮನೆಯ ಕಾಂಪೌಂಡ್ ಜಿಗಿದ ಚಿರತೆ ಒಳ ನುಗ್ಗಿ ಕೊಟ್ಟಿಗೆಗೆ ಪ್ರವೇಶಿಸಿತು. ಅಲ್ಲಿದ್ದ ಆರು ತಿಂಗಳ ಕರುವಿನ ಕುತ್ತಿಗೆಗೆ ಬಾಯಿ ಹಾಕಿ ಗಾಯಗೊಳಿಸಿದ್ದು, ಹೊತ್ತೊಯ್ಯಲು ಯತ್ನಿಸಿತು.
ಕರುವಿನ ಚೀರಾಟದಿಂದ ಮನೆಯವರು ಎಚ್ಚೆತ್ತಿದ್ದು ಕೊಟ್ಟಿಗೆಯ ಲೈಟ್ ಹಾಕಿ ಹೋದ ಸಂದರ್ಭ ಚಿರತೆ ಅಲ್ಲಿಂದ ಪರಾರಿ ಆಯಿತು ಎಂದು ಸ್ಥಳೀಯರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.