ADVERTISEMENT

ರಾಮನಗರ: ಮನೆಗೆ ಹೊಕ್ಕಿದ್ದ ಚಿರತೆ ಸೆರೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2020, 6:28 IST
Last Updated 14 ಏಪ್ರಿಲ್ 2020, 6:28 IST
   

ರಾಮನಗರ: ತಾಲ್ಲೂಕಿನ ಕವಣಾಪುರ ಗ್ರಾಮದ ಮನೆಯೊಂದಕ್ಕೆ ನುಗ್ಗಿದ್ದ ಚಿರತೆಯನ್ನು ಮಂಗಳವಾರ ಮುಂಜಾನೆ ಸೆರೆ ಹಿಡಿಯಲಾಯಿತು.

ಸೋಮವಾರ ತಡರಾತ್ರಿ ಗ್ರಾಮದ ಚಿಕ್ಕರಾಜು ಎಂಬುವರ ದನದ ಕೊಟ್ಟಿಗೆಯಲ್ಲಿನ ಕುರಿ ಹಿಡಿಯಲು ಚಿರತೆ ನುಗ್ಗಿತ್ತು. ಈ ಸಂದರ್ಭ ಮನೆಯವರು ಎಚ್ಚೆತ್ತು ಮನೆಯ ಬಾಗಿಲು ಮುಚ್ಚಿದ್ದರು. ಇದರಿಂದಾಗಿ ಚಿರತೆ ಕೊಟ್ಟಿಗೆಯ ಒಳಗೇ ಸೆರೆಯಾಗಿತ್ತು.

ಬನ್ನೇರುಘಟ್ಟ ಅರಣ್ಯ ವಲಯದ ವೈದ್ಯರು ಅರೆವಳಿಕೆ ಮದ್ದು ನೀಡಿ ಚಿರತೆ ಸೆರೆ ಹಿಡಿದರು. ಎರಡು ವರ್ಷದ ಗಂಡು ಚಿರತೆ ಇದಾಗಿದ್ದು, ಬನ್ನೇರುಘಟ್ಟ ಪ್ರದೇಶಕ್ಕೆ ಬಿಡುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.