ADVERTISEMENT

ಕನಕಪುರ: ಡಿ.ಕೆ. ಸುರೇಶ್ ಪರ ಸಾಹಿತಿ ಲಲಿತಾ ನಾಯಕ್ ಪ್ರಚಾರ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2024, 4:49 IST
Last Updated 28 ಮಾರ್ಚ್ 2024, 4:49 IST
   

ಕನಕಪುರ: ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರ ಪರವಾಗಿ ಸಾಹಿತಿ ಬಿ.ಟಿ. ಲಲಿತಾ ನಾಯಕ್ ಅವರು ಪ್ರಚಾರ ಆರಂಭಿಸಿದ್ದಾರೆ. ಸುರೇಶ್ ಪರ ವಿಡಿಯೊ ಹರಿಬಿಟ್ಟಿರುವ ಅವರು, ‘ಯಾವುದೇ ಹಮ್ಮುಬಿಮ್ಮಿಲ್ಲದೇ ಸಾರ್ವಜನಿಕ ಸೇವೆಯನ್ನೇ ಬದುಕಾಗಿಸಿಕೊಂಡಿರುವ ಸುರೇಶ್ ಅವರಿಗೆ ಜನ ಮತ ನೀಡಬೇಕು’ ಎಂದು ಮನವಿ ಮಾಡಿದ್ದಾರೆ.

‘ಕ್ರಿಯಾಶೀಲ ಸಂಸದನಾಗಿ ಸಂಸದೀಯ ಕಾರ್ಯಕಲಾಪಗಳಿಗೆ ತಪ್ಪಿಸಿಕೊಳ್ಳದದ ಸುರೇಶ್ ಅವರ ವ್ಯಕ್ತಿತ್ವ ಜನ ಮೆಚ್ಚುವಂತಹದ್ದು. ನರೇಗಾ ಯೋಜನೆಯ ಆಶಯವನ್ನು ಸಾಕಾರಗೊಳಿಸಿದ ಏಕೈಕ ಸಂಸದ ಅವರು. ಹಾಗಾಗಿ, ಸುರೇಶ್ ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮತದಾರರು ಮತ್ತೊಮ್ಮೆ ಬೆಂಬಲಿಸಬೇಕು’ ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT