ADVERTISEMENT

ಮುದಗೆರೆ ಪಿಎಸಿಎಸ್‌ಗೆ ಅಧ್ಯಕ್ಷ, ಉಪಾಧ್ಯಕ್ಷ ಅವಿರೋಧ ಆಯ್ಕೆ

ಆಯ್ಕೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2023, 13:22 IST
Last Updated 7 ಸೆಪ್ಟೆಂಬರ್ 2023, 13:22 IST
ಚನ್ನಪಟ್ಟಣ ತಾಲ್ಲೂಕಿನ ಮುದಗೆರೆ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ನೂತನ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದ ನಾಥೇಗೌಡ ಹಾಗೂ ಇಂದ್ರಮ್ಮ ಅವರನ್ನು ಅಭಿನಂದಿಸಲಾಯಿತು
ಚನ್ನಪಟ್ಟಣ ತಾಲ್ಲೂಕಿನ ಮುದಗೆರೆ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ನೂತನ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದ ನಾಥೇಗೌಡ ಹಾಗೂ ಇಂದ್ರಮ್ಮ ಅವರನ್ನು ಅಭಿನಂದಿಸಲಾಯಿತು   

ಚನ್ನಪಟ್ಟಣ: ತಾಲ್ಲೂಕಿನ ಮುದಗೆರೆ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ನಾಥೇಗೌಡ ಹಾಗೂ ಉಪಾಧ್ಯಕ್ಷರಾಗಿ ಇಂದ್ರಮ್ಮ ಅವಿರೋಧವಾಗಿ ಆಯ್ಕೆಯಾದರು.

ಸಂಘದ ಕಚೇರಿಯಲ್ಲಿ ಈಚೆಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಈ ಇಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ ಕಾರಣ ಅವಿರೋಧ ಆಯ್ಕೆ ನಡೆಯಿತು. ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆ ಅಭಿವೃದ್ಧಿ ಅಧಿಕಾರಿ ಕೆ.ಟಿ.ಉಮೇಶ್ ಕಾರ್ಯನಿರ್ವಹಿಸಿದರು.

ನಿರ್ದೇಶಕರಾದ ಎಂ.ಎಚ್.ಜಯರಾಮು, ಕೆ.ರೇವ ಹೆಗ್ಗಡೆ, ಎಂ.ಸಿ.ಶಿವರಾಮು, ಎಂ.ಎಚ್.ದೀಪಕ್, ಕೆ.ಪಿ. ಶಿವರಾಮು, ಕೆ.ಪಿ.ಲೋಕೇಶ್, ಎಂ.ರಾಮಕೃಷ್ಣ, ನಾರಾಯಣ್, ಎಂ.ಆರ್.ಬಿಂದು, ಅಂದಾನಪ್ಪ, ಸಂಘದ ಸಿಇಒ ಜಿ.ಸಂಜುಕುಮಾರ್, ಗುಮಾಸ್ತ ಸಿದ್ದರಾಜು, ಸಿಬ್ಬಂದಿ ಎಂ.ಪೃಥ್ವಿರಾಜು, ಕೆ.ಎ.ಅನಿಲ್ ಕುಮಾರ್, ಸ್ಥಳೀಯ ಮುಖಂಡರಾದ ಸಿ.ಅಂಕಣ್ಣ, ಪುಟ್ಟಸ್ವಾಮಿ, ದೊಡ್ಡಣ್ಣ, ನಾಗಣ್ಣ, ಪ್ರವೀಣ್, ಕೋಲೂರು ಕೃಷ್ಣೇಗೌಡ, ಅರುಣ್, ಮಹದೇವು, ಸೀಬನಹಳ್ಳಿ ನಾಗಲಿಂಗಯ್ಯ, ಕೋಲೂರು ಮುದ್ದೇಗೌಡ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.