ಚನ್ನಪಟ್ಟಣ: ನರೇಗಾ ಕಾಮಗಾರಿಯ ಬಿಲ್ ಪಾವತಿಸಲು ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಮುದಗೆರೆ ಗ್ರಾಮ ಪಂಚಾಯಿತಿ ಪಿಡಿಒ ಡಿ. ಮಂಜುಳಾ ಹಾಗೂ ಕೋಲೂರು ಗ್ರಾ.ಪಂ. ಸದಸ್ಯ ಕೆ.ಎಂ. ಮಹೇಶ್ ಎಂಬುವರನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಮಂಗಳವಾರ ಬಂಧಿಸಿದರು.
ಮಾಕಳಿ ನಿವಾಸಿಯೊಬ್ಬರು ಮುದಗೆರೆ ಗ್ರಾ.ಪಂ. ವತಿಯಿಂದ ನರೇಗಾ ಅಡಿ ಬೆಳಕೆರೆ ಗ್ರಾಮದ ಪೈಪ್ಲೈನ್ ಕಾಮಗಾರಿ ನಿರ್ವಹಿಸಿದ್ದರು. ಈ ಕಾಮಗಾರಿಯ ಬಿಲ್ ₹65 ಸಾವಿರ ಆಗಿತ್ತು. ಈ ಹಣ ಬಿಡುಗಡೆ ಮಾಡಲು ಪಿಡಿಒ ಅವರು ಗ್ರಾ.ಪಂ. ಸದಸ್ಯ ಪಾಂಡು ಎಂಬುವರ ಮೂಲಕ ಶೇ 17ರಂತೆ ಒಟ್ಟು 11ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಗುತ್ತಿಗೆದಾರರು ಈ ಬಗ್ಗೆ ಎಸಿಬಿಗೆ ದೂರು ನೀಡಿದ್ದರು. ಪಿಡಿಒ ಮಂಜುಳಾ ಪರವಾಗಿ ಕೋಲೂರು ಗ್ರಾ.ಪಂ. ಸದಸ್ಯ ಮಹೇಶ್ ಎಂಬುವರು ಲಂಚ ಪಡೆಯುತ್ತಿದ್ದ ವೇಳೆ ಅಧಿಕಾರಿಗಳು ದಾಳಿ ಮಾಡಿ ಹಣ ವಶಪಡಿಸಿಕೊಂಡು ಆರೋಪಿಗಳಿಬ್ಬರನ್ನು ಬಂಧಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.