ADVERTISEMENT

ಮಾಗಡಿ: ಹನುಮಾಪುರದ ಉಡುಸಲಮ್ಮ ದೇಗುಲದ ಬೀಗ ಒಡೆದು ಪೂಜೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2023, 15:37 IST
Last Updated 16 ಆಗಸ್ಟ್ 2023, 15:37 IST
ಮಾಗಡಿ ತಾಲ್ಲೂಕಿನ ಹನುಮಾಪುರದ ಉಡುಸಲಮ್ಮ ದೇವಾಲಯಕ್ಕೆ ಒಂದು ಗುಂಪಿನವರು ಹಾಕಿದ್ದ ಬೀಗವನ್ನು ಒಡೆದು ಹಾಕಿದ ಮತ್ತೊಂದು ಗುಂಪಿನ ಮುಖಂಡ ಕನ್ನಡ ಕುಮಾರ್‌ ಮಾತನಾಡಿದರು
ಮಾಗಡಿ ತಾಲ್ಲೂಕಿನ ಹನುಮಾಪುರದ ಉಡುಸಲಮ್ಮ ದೇವಾಲಯಕ್ಕೆ ಒಂದು ಗುಂಪಿನವರು ಹಾಕಿದ್ದ ಬೀಗವನ್ನು ಒಡೆದು ಹಾಕಿದ ಮತ್ತೊಂದು ಗುಂಪಿನ ಮುಖಂಡ ಕನ್ನಡ ಕುಮಾರ್‌ ಮಾತನಾಡಿದರು   

ಮಾಗಡಿ: ತಾಲ್ಲೂಕಿನ ಹನುಮಾಪುರದ ಉಡುಸಲಮ್ಮ ದೇವಾಲಯಕ್ಕೆ ಹಾಕಿದ್ದ ಬೀಗವನ್ನು ಒಡೆದು ಬೋವಿಸಮುದಾಯದವರು ಪೂಜೆ ಸಲ್ಲಿಸಿದರು.

ಗ್ರಾಮದ ಮುಖಂಡ ಕನ್ನಡ ಕುಮಾರ್‌ ಮಾತನಾಡಿ, ‘ಹಿಂದೆ ಕಲ್ಲು ಚಪ್ಪಡಿಯಿಂದ ಪೂರ್ವಿಕರು ಕಟ್ಟಿಸಿದ್ದ ಉಡುಸಲಮ್ಮ ದೇವಾಲಯವಿತ್ತು. ಭಕ್ತರೆಲ್ಲರೂ ಸೇರಿ ಸುಸಜ್ಜಿತವಾದ ನೂತನ ದೇವಾಲಯ ನಿರ್ಮಿಸಲಾಯಿತು. ನಂತರ ಬೆಂಗಳೂರಿನಲ್ಲಿ ವಾಸ ಇರುವವರು ಟ್ರಸ್ಟ್‌ ರಚಿಸಿಕೊಂಡು, ಗ್ರಾಮದ ಮೂಲನಿವಾಸಿಗಳ ಗಮನಕ್ಕೆ ತಾರದೆ ದೇವಾಲಯದ ಕಾಣಿಕೆ ಹುಂಡಿ ಹೊಡೆದು ಕೊಂಡೊಯ್ದಿದ್ದಾರೆ’ ಎಂದು ದೂರಿದರು.

‘ಶೇಖದಾರ್‌ ಎಚ್‌.ರಾಮಯ್ಯ ಅವರ ಅಜ್ಜಿ ಮತ್ತು ತಾತ ಗೋವಿಂದಪ್ಪ ದೇವಾಲಯ ನಿರ್ಮಿಸಲು ಭೂಮಿ ದಾನ ನೀಡಿದ್ದರು. ಉತ್ಸವಗಳಲ್ಲಿ ಎರಡೂ ಕಡೆಯವರು ಬೇರೆ ಬೇರೆ ಕಡೆ ಅನ್ನದಾಸೋಹ ನಡೆಸಿಕೊಂಡು ಬಂದಿದ್ದಾರೆ. ಭೂಮಿ ದಾನ ನೀಡಿದ್ದ ಎಚ್‌.ರಾಮಯ್ಯ ಅವರ ಮೊಮ್ಮಗ ಪುನೀತ್‌ ದೇವಾಲಯದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಅವರ ಗಮನಕ್ಕೆ ತಾರದೆ ಹೊರಗಿನವರು ದೇವಾಲಯಕ್ಕೆ ಬೀಗ ಹಾಕಿದ್ದರು. ಸ್ಥಳೀಯರಾದ ನಾವು ಬೀಗ ಒಡೆದು ಪೂಜೆ ಸಲ್ಲಿಸಿದ್ದೇವೆ’ ಎಂದು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.