ಮಾಗಡಿ: ಇಲ್ಲಿನಕೆಂಪೇಗೌಡ ಸರ್ಕಲ್ನಲ್ಲಿ ಒಳಚರಂಡಿ ಛೇಂಬರ್ ಕಟ್ಟಿಕೊಂಡು ಕಲುಷಿತ ನೀರು ರಸ್ತೆ ಮೇಲೆ ಹರಿದು ದುರ್ಗಂಧ ಬೀರುತ್ತಿದೆ ಎಂದು ಅಂಗಡಿ ನಾಗರಾಜು ದೂರಿದ್ದಾರೆ.
‘ಒಳಚರಂಡಿ ಕಾಮಗಾರಿ ತುಂಬಾ ಅವೈಜ್ಞಾನಿಕವಾಗಿ ನಡೆದಿದೆ. ಇದರಿಂದ ಜನರು ನಿತ್ಯ ಪರದಾಡುವಂತಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವರ್ತಕ ಕರ್ಣಾರ್ಜುನ್ ಮಾತನಾಡಿ ‘ಒಳಚರಡಿ ವ್ಯವಸ್ಥೆ ಲೋಪದೋಷ ಸರಿಪಡಿಸಲು ಅಧಿಕಾರಿಗಳು ಮುಂದಾಗಬೇಕು’ ಎಂದರು.
ಇನ್ನೆರಡು ದಿನದಲ್ಲಿ ಒಳಚರಂಡಿ ಛೇಂಬರ್ ಸರಿಪಡಿಸಿ ಸ್ವಚ್ಛತೆ ಕಾಪಾಡಲಾಗುವುದು ಎಂದು ಪುರಸಭೆಯ ಮುಖ್ಯಾಧಿಕಾರಿ ಮಹೇಶ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.