ಕಸಬಾ (ಕನಕಪುರ): ಅಳ್ಳಿಮಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಡೆದೊಡ್ಡಿ ಮುರಳೀಧರ್ ಎಂಬುವವರ ತೋಟದಲ್ಲಿ ಗಂಧದ ಮರ ಕಳವು ಮಾಡಲಾಗಿದೆ. ಹಲವು ವರ್ಷದಿಂದ ಬೆಳೆಸಿದ್ದ ಎರಡು ಗಂಧದ ಮರಗಳಲ್ಲಿ ಒಂದನ್ನು ಬೇರು ಸಮೇತ ಕತ್ತರಿಸಲಾಗಿದೆ.
ಇದರ ಬೆಲೆ ₹ 40 ಸಾವಿರ ಎಂದು ಮುರಳೀಧರ್ ಅವರು ಗ್ರಾಮಾಂತರ ಠಾಣೆ ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.