ಮಾಗಡಿ: ತಾಲ್ಲೂಕಿನ ಸೋಲೂರು ರೇಣುಕಾ ಯಲ್ಲಮ್ಮದೇವಿ ದೇವಸ್ಥಾನದಲ್ಲಿ ವಿಖ್ಯಾತಾನಂದ ಸ್ವಾಮೀಜಿ ನೇತೃತ್ವದಲ್ಲಿ ಶರನ್ನವರಾತ್ರಿ ಮಹೋತ್ಸವ ಸೆ.22ರಿಂದ ಅ.2ರವರೆಗೆ ಅದ್ದೂರಿಯಾಗಿ ನಡೆಯಲಿದೆ.
ಶರನ್ನವರಾತ್ರಿ ಮಹೋತ್ಸವವನ್ನು ಸೋಲೂರಿನ ಆರ್ಯ ಈಡಿಗ ಸಂಸ್ಥಾನದ ಆವರಣದಲ್ಲಿರುವ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ವಿಶೇಷ ಅಲಂಕಾರ: ಸೆ.22ರಂದು ದುಂಡು ಮಲ್ಲಿಗೆ ಅಲಂಕಾರ, ಸೆ.23ರಂದು ಶಾಖಾಂಬರಿ ಅಲಂಕಾರ, ಸೆ.24ರಂದು ಮುತ್ತಿನ ಅಲಂಕಾರ, ಸೆ.25ರಂದು ಬಾದಾಮಿ ಅಲಂಕಾರ, ಸೆ.26ರಂದು ವಸ್ತ್ರ ಅಲಂಕಾರ ಸೆ.27ರಂದು ಬೆಣ್ಣೆ ಅಲಂಕಾರ, ಸೆ.28ರಂದು ಲಕ್ಷ್ಮಿ ಅಲಂಕಾರ, ಸೆ.29ರಂದು ಸರಸ್ವತಿ ಅಲಂಕಾರ, ಸೆ.30ರಂದು ದುರ್ಗಾ ಅಲಂಕಾರ, ಅ.1ರಂದು ಹೂವಿನ ಅಲಂಕಾರ, ಅ.2ರಂದು ರಜತ ಕವಚ ಅಲಂಕಾರ ನಡೆಯಲಿದೆ. ಅಭಿಷೇಕ, ಅಲಂಕಾರ, ಚಂಡಿ ಸಪ್ತಶತಿ ಪಾರಾಯಣ, ಕಲ್ಲೋಕ್ತ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ.
ಪ್ರತಿದಿನ ಬೆಳಗ್ಗೆ ದುರ್ಗಾಸೂಕ್ತ ಹೋಮ, ಮಧ್ಯಾಹ್ನ ಅನ್ನಸಂತರ್ಪಣೆ ಮತ್ತು ಸಂಜೆ 6ಕ್ಕೆ ಲಲಿತ ಸಹಸ್ರನಾಮ ಪಾರಾಯಣ ಇರಲಿದೆ. ಮಾಹಿತಿಗೆ ಸಂತೋಷ್ಕುಮಾರ್: 9945075920.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.