ADVERTISEMENT

ಸಿದ್ಧಗಂಗೆ ಶ್ರೀಗಳ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2019, 14:06 IST
Last Updated 1 ಏಪ್ರಿಲ್ 2019, 14:06 IST
ಮಾಗಡಿ ವಾಸವಿ ವಿದ್ಯಾನಿಕೇತನ್‌ ಶಾಲೆನಲ್ಲಿ ಡಾ.ಶಿವಕುಮಾರಸ್ವಾಮೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಅವರ 112ನೇ ಜನ್ಮದಿನ ಆಚರಿಸಲಾಯಿತು
ಮಾಗಡಿ ವಾಸವಿ ವಿದ್ಯಾನಿಕೇತನ್‌ ಶಾಲೆನಲ್ಲಿ ಡಾ.ಶಿವಕುಮಾರಸ್ವಾಮೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಅವರ 112ನೇ ಜನ್ಮದಿನ ಆಚರಿಸಲಾಯಿತು   

ಮಾಗಡಿ: ವಾಸವಿ ವಿದ್ಯಾನಿಕೇತನ್‌ ಶಾಲೆಯಲ್ಲಿ ಸೋಮವಾರ ಸಿದ್ಧಗಂಗಾಮಠದ ಲಿಂಗೈಕ್ಯ ಡಾ.ಶಿವಕುಮಾರಸ್ವಾಮೀಜಿ ಅವರ 112ನೇ ಜನ್ಮದಿನವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ವಾಸವಿ ವಿದ್ಯಾಪೀಠದ ಅಧ್ಯಕ್ಷ ಎಸ್‌.ಜಿ.ರಮೇಶ್‌ ಗುಪ್ತ ಮತ್ತು ಕಾರ್ಯದರ್ಶಿ ಬಿ.ಎನ್‌.ರಾಜು ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಅವರ ಸೇವೆ ಸ್ಮರಿಸಿದರು.

ವಾಸವಿ ವಿದ್ಯಾನಿಕೇತನ್‌ ಪ್ರೌಢಶಾಲೆ ಮುಖ್ಯಶಿಕ್ಷಕ ವಸಂತ ಕುಮಾರ್‌, ಮಲ್ಲಾಡಿಹಳ್ಳಿ ರಾಘವೇಂದ್ರ ಯೋಗ ಶಿಕ್ಷಣ ಕೇಂದ್ರದ ತರಬೇತುದಾರ ಟಿ.ಪಂಚಾಕ್ಷರಿ ಶಿವಕುಮಾರಸ್ವಾಮೀಜಿ ಜೀವನ ಕುರಿತು ಮಾತನಾಡಿದರು. ಶಾಲೆ ಶಿಕ್ಷಕರು, ಮಕ್ಕಳು, ಸಿಬ್ಬಂದಿವರ್ಗ, ಪೋಷಕರು ಇದ್ದರು. ದಾಸೋಹ ಏರ್ಪಡಿಸಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.