ADVERTISEMENT

ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2021, 3:07 IST
Last Updated 4 ಸೆಪ್ಟೆಂಬರ್ 2021, 3:07 IST
ಕೃಷ್ಣಪ್ಪ
ಕೃಷ್ಣಪ್ಪ   

ರಾಮನಗರ: ನಗರದ ಜಿಕೆಎಂಬಿಎಸ್ ಶಾಲೆಯ ಕೃಷ್ಣಪ್ಪ ಅವರು ರಾಜ್ಯ ಸರ್ಕಾರದ 2021–22ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಶಾಲೆಯಲ್ಲಿ ನಲಿ ಕಲಿ ವಿಧಾನವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಕಾರಣಕ್ಕಾಗಿ ಅವರಿಗೆ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಈ ಪುರಸ್ಕಾರ ದೊರೆತಿದೆ. 1ರಿಂದ 3ನೇ ತರಗತಿ ಮಕ್ಕಳಿಗೆ ನಲಿಕಲಿ ಮೂಲಕ ನೂತನ ವಿಧಾನದಲ್ಲಿ ಪಠ್ಯವನ್ನು ಶಿಕ್ಷಕ ಕೃಷ್ಣಪ್ಪ ಬೋಧನೆ ಮಾಡುತ್ತಿದ್ದರು. ಪ್ರಶಸ್ತಿ ದೊರೆತ ಬಗ್ಗೆ ಬಗ್ಗೆ ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದು ತಮ್ಮ ಜವಾಬ್ದಾರಿ ಹೆಚ್ಚಿಸಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT