ADVERTISEMENT

ಶೋಕಸಾಗರದ ನಡುವೆ ಹುತಾತ್ಮ ಯೋಧನ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2020, 14:05 IST
Last Updated 17 ಜನವರಿ 2020, 14:05 IST
ಹುತಾತ್ಮ ಯೋಧ ವೆಂಕಟನರಸಿಂಹಮೂರ್ತಿ ಅವರ ಪಾರ್ಥೀವ ಶರೀರಕ್ಕೆ ಶಾಸಕ ಎ.ಮಂಜುನಾಥ ಹೂಮಾಲೆ ಹಾಕಿ ಗೌರವನಮನ ಸಲ್ಲಿಸಿದರು.
ಹುತಾತ್ಮ ಯೋಧ ವೆಂಕಟನರಸಿಂಹಮೂರ್ತಿ ಅವರ ಪಾರ್ಥೀವ ಶರೀರಕ್ಕೆ ಶಾಸಕ ಎ.ಮಂಜುನಾಥ ಹೂಮಾಲೆ ಹಾಕಿ ಗೌರವನಮನ ಸಲ್ಲಿಸಿದರು.   

ಮಾಗಡಿ: ಜಮ್ಮುವಿನ ಉದಯಪುರ್‌ನಲ್ಲಿ ಮೃತಪಟ್ಟ ‌ಯೋಧ ವೆಂಕಟನರಸಿಂಹಮೂರ್ತಿ ಅಂತ್ಯಕ್ರಿಯೆ ಬಂಧುಗಳ ಶೋಕಸಾಗರದ ನಡುವೆ ಶುಕ್ರವಾರ ಮಧ್ಯಾಹ್ನ ಅವರ ತೋಟದಲ್ಲಿ ನಡೆಯಿತು. ಅಲಂಕೃತ ವಾಹನದಲ್ಲಿ ಯೋಧನ ಪಾರ್ಥಿವಶರೀರ ಇಟ್ಟು ಮೆರವಣಿಗೆ ನಡೆಸಲಾಯಿತು.

ಅಂತಿಮ ದರ್ಶನ: ಶುಕ್ರವಾರ ಶಾಸಕ ಎ.ಮಂಜುನಾಥ, ಬಿಜೆಪಿ ಮುಖಂಡ ಎ.ಎಚ್‌.ಬಸವರಾಜು, ಗುರುವಾರ ರಾತ್ರಿ ಕಾಂಗ್ರೆಸ್‌ ಮುಖಂಡ ಎಚ್‌.ಸಿ.ಬಾಲಕೃಷ್ಣ ಅಂತಿಮ ನಮನ ಸಲ್ಲಿಸಿದರು. ಮೃತರ ತಾಯಿ ವಿಜಯಮ್ಮ, ತಂದೆ ಪೈಲ್ವಾನ್‌ ಪಾಪಣ್ಣ, ಸೋದರಿ ಗಿರಿಜಾ ಪರಮೇಶ್ವರ ಇದ್ದರು. ತಿಗಳ ಸಮುದಾಯದಂತೆ ಅಂತಿಮ ಸಂಸ್ಕಾರ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT